ಭಾರತ :
ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಈಗ ಭಾರತ ಎಲ್ಲೆಡೆ ಅಲರ್ಟ್ ಆಗಿದೆ. ಇನ್ನು ಪಾಕಿಸ್ತಾನ ಯಾವಾಗ ಬೇಕಾದರೂ ಯುದ್ದ ಸಾರಬಹುದು. ಈ ಕಾರಣಕ್ಕೆ ಭಾರತದ ಫೈಟರ್ ಜೆಟ್ಗಳು ಉತ್ತರ ಪ್ರದೇಶದ ಶಹಜಹಾನ್ಪುರನ ಗಂಗಾ ಎಕ್ಸ್ಪ್ರೆಸ್ ವೇನಲ್ಲಿ ತಾಕತ್ತು ಪ್ರದರ್ಶಿಸುತ್ತಿವೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನಲೆ ಪ್ರಧಾನಿ ಮೋದಿಯವರು ಮೂರು ಪಡೆಗಳ ಮುಖ್ಯಸ್ಥರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಈ ಕಾರಣಕ್ಕೆ ಹಗಲು- ರಾತ್ರಿ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗುವ ದೇಶದಲ್ಲಿನ ಏಕೈಕ ಹೆದ್ದಾರಿಯಾದ ಗಂಗಾ ಎಕ್ಸ್ ಪ್ರೆಸ್ ವೇಯಲ್ಲಿ ವಾಯುಪಡೆಯ ಯುದ್ಧ ವಿಮಾನಗಳು ತಮ್ಮ ತಾಕತ್ತು ಪ್ರದರ್ಶಿಸುತ್ತಿವೆ. ಫೈಟರ್ ಜೆಟ್ ಗಳು ರಾತ್ರಿ ವೇಳೆ ಇಲ್ಲಿಂದ ಹಾರುವ ಮತ್ತು ಲ್ಯಾಂಡಿಂಗ್ ಆಗುವ ಕಸರತ್ತು ನಡೆಸುತ್ತಿವೆ.
ಸಂಜೆ 7 ರಿಂದ ರಾತ್ರಿ 10 ಗಂಟೆಯ ನಡುವೆ ನಡೆದ ಯುದ್ಧಾಭ್ಯಾಸದಲ್ಲಿ 3.5 ಕಿಲೋಮೀಟರ್ ಇರುವ ಈ ವಾಯುನೆಲೆಯಲ್ಲಿ ರಫೇಲ್, ಸುಖೋಯ್, ಜಾಗ್ವಾರ್ ಮತ್ತು ಮಿರಾಜ್ -2000, ಎಂ-32 ಯುದ್ಧ ವಿಮಾನಗಳು ಟಚ್-ಅಂಡ್-ಗೋ ಕಸರತ್ತು ನಡೆಸುತ್ತಿವೆ. ವಾಯುಪಡೆಯ ಯುದ್ಧ ವಿಮಾನಗಳು 24 ಗಂಟೆಯಲ್ಲಿ ಯಾವಾಗ ಬೇಕಾದರೂ ಯುದ್ದಕ್ಕೆ ಸಿದ್ದವಿರಬೇಕಾಗಿದೆ.