ಶಿರಾ: ಶಿರಾದಲ್ಲಿ ಪಶು ಆಸ್ಪತ್ರೆಗಳ ಸ್ಥಾಪನೆ | ಟಿ.ಬಿ.ಜಯಚಂದ್ರ ಹೇಳಿದ್ದೇನು?

ಶಿರಾ: 

ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ದೊಡ್ಡಬಾಣಗೆರೆ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆ, ಪ್ರಾಥಮಿಕ ಪತ್ತಿನ ಸಹಕಾರ  ಸಂಘ ದೊಡ್ಡ ಬಾಣಗೆರೆ ಮತ್ತು ಗ್ರಾಮ ಪಂಚಾಯಿತಿ ದೊಡ್ಡ ಬಾಣಗೆರೆ ಇವರ ಸಹಯೋಗದಲ್ಲಿ ನೂತನವಾಗಿ ಪ್ರಾರಂಭಿಸಿದ ಪಶು ಚಿಕಿತ್ಸಾ ಕೇಂದ್ರವನ್ನು ಶಾಸಕ ಟಿ.ಬಿ ಜಯಚಂದ್ರ ಉದ್ಘಾಟಿಸಿದರು.

ನೂತನವಾಗಿ ಪ್ರಾರಂಭಿಸಿದ ಪಶು ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ,  ತಾಲೂಕಿಗೆ ಭದ್ರಾ ಮೇಲ್ಡಂಡೆ  ಯೋಜನೆಯಿಂದ ನೀರು  ಹರಿಸುವ  ಕಾಮಗಾರಿ  ಶೀಘ್ರವಾಗಿ ಪ್ರಾರಂಭವಾಗಲಿದೆ. ಇದರಿಂದಾಗಿ ತಾಲೂಕಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುವುದು. ಹೇಮಾವತಿ  ಮತ್ತು  ಭದ್ರಾ ನೀರಿನಿಂದಾಗಿ ತಾಲೂಕಿಗೆ ಹೆಚ್ಚಿನ ಪ್ರಯೋಜನವಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಮ್ಮ ಕಾಂತರಾಜ್,ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಗಿರೀಶ್ ರೆಡ್ಡಿ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ರಮೇಶ್,ಪಶು ವೈದ್ಯಾಧಿಕಾರಿ ನಾಗೇಶ್, ಸೇರಿ ಮುಖಂಡರು ಹಾಜರಿದ್ದರು. 

Author:

...
Keerthana J

Copy Editor

prajashakthi tv

share
No Reviews