ತುಮಕೂರು : ಸಿಎಂ ಸಿದ್ದರಾಮಯ್ಯ ಭಾವಚಿತ್ರ ಸುಟ್ಟು ಬಿಜೆಪಿ ಪ್ರತಿಭಟನೆ..!

ತುಮಕೂರು :

ಮಂಗಳೂರಿನಲ್ಲಿ  ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಭೀಕರ ಕೊಲೆ ಖಂಡಿಸಿ ತುಮಕೂರಿನಲ್ಲಿ ಜಿಲ್ಲಾ ಬಿಜೆಪಿಯ ಒಬಿಸಿ ಘಟಕದಿಂದ ಟೌನ್‌ ಹಾಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಧ್ಯಾಹ್ನ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ವೇದಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಟೌನ್‌ ಹಾಲ್‌ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಸುಹಾಸ್ ಶೆಟ್ಟಿ ಕೊಲೆಗೆ ಪರೋಕ್ಷವಾಗಿ ಬಿಜೆಪಿ ಸರ್ಕಾರವೇ ಕಾರಣ ಎಂದು ಕಿಡಿಕಾರಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ಒಬಿಸಿ ನಾಯಕರಾದ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಮಾತನಾಡಿ, ಸುಹಾಸ್‌ ಶೆಟ್ಟಿ ಕೊಲೆಯಾಗಿ 24 ಗಂಟೆಯಾಗಿದೆ. ಸಿಸಿಟಿವಿ ಪೂಟೇಜ್‌ ಇದೆ. ಗಾಡಿ ನಂಬರ್‌ ಇದೆ. ಆದರೂ ಇನ್ನು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಕೊಲೆಯನ್ನು ನೋಡಿದರೆ ನಮಗೆ ಪಹಾಲ್ಗಾಮ್‌ ನೆನಪಿಗೆ ಬರುತ್ತೆ. ಅಲ್ಲಿ ಹೇಗೆ ಧರ್ಮವನ್ನು ಕೇಳಿ ಕೊಲೆ ಮಾಡಿದರೋ ಅದೇ ರೀತಿಯಾಗಿ ಮಂಗಳೂರಲ್ಲಿ ಕೊಲೆ ಆಗ್ತಿವೆ. ಹಿಂದೂಗಳನ್ನೇ ಟಾರ್ಗೇಟ್‌ ಮಾಡಿ ಕೊಲೆಗಳು ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡ್ತಿರೋದು ಶೋಚನೀಯ. ಇಂತಹ ಕೊಲೆಗಳು ನಡೀತಾ ಇದ್ದರೂ ಸರ್ಕಾರ ಮಾತ್ರ ಕೈಕಟ್ಟಿ ಕೂತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಇನ್ನು ಈ ಪ್ರತಿಭಟನೆಯಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.

Author:

...
Sushmitha N

Copy Editor

prajashakthi tv

share
No Reviews