MADHUGIRI NEWS : ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಅನ್ನೋ ಮಾತು ನೂರಕ್ಕೆ ನೂರು ಸತ್ಯ.. ಗಾದೆ ಮಾತಿನಂತೆ ಬೆಳೆಯುವವರೆಗೂ ಅಣ್ಣ- ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು ಅನ್ನೋದನ್ನ ಇವರು ನಿರೂಪಿಸಿ ತೋರಿಸಿದ್ದಾರೆ. ಜಮೀನು ವಿವಾದಕ್ಕೆ ಸ್ವಂತದವರ ಮೇಲೆ ಮುಖ ಮೂತಿ ನೋಡದೇ, ಕಲ್ಲು- ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೂ ದಾಯಾದಿಗಳ ನಡುವೆ ಗಲಾಟೆಯಾಗಿರೋದು ಮಧುಗಿರಿ ತಾಲೂಕಿನ ಪುರವರ ಹೋಬಳಿಯ ತಿಮ್ಮಾಪುರ ತಾಂಡದಲ್ಲಿ.
ಮಧುಗಿರಿ ತಾಲೂಕಿನ ಪುರವರ ಹೋಬಳಿಯ ತಿಮ್ಮಾಪುರ ತಾಂಡದ ಸರ್ವೇ ನಂಬರ್ 135/ 1ರಲ್ಲಿ ಸುಮಾರು 22 ಕುಂಟೆ ಜಮೀನು ವಿವಾದ ಸಂಬಂಧ ಸಹೋದರರಾದ ದೇವರಾಜ್ ನಾಯ್ಕ್, ಸತೀಶ್ ನಾಯ್ಕ್, ಲೋಕೇಶ್ ನಾಯ್ಕ್ ಹಾಗೂ ರಾಘವೇಂದ್ರ ನಾಯ್ಕ್ ನಡುವೆ ಗಲಾಟೆಯಾಗಿದೆ, ಬರೀ ಮಾತಿನಲ್ಲಿ ಗಲಾಟೆ ಮಾಡದೇ ಕಲ್ಲು- ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ತಿಮ್ಮಾಪುರ ತಾಂಡದ ಸರ್ವೇ ನಂ 135/1 ರಲ್ಲಿ ಸುಮಾರು 22 ಕುಂಟೆ ಜಮೀನು ಪೀರಮ್ಮ ಎಂಬುವವರು ಹೆಸರಿನಲ್ಲಿದೆ. ಫೀರಮ್ಮಗೆ ಒಟ್ಟು ಐದು ಮಂದಿ ಗಂಡು ಮಕ್ಕಳಿದ್ದು, ಸುಬ್ಬನಾಯ್ಕ್ ನ ಮಗನಾದ ರಾಘವೇಂದ್ರ ಈ ಜಾಗದಲ್ಲಿ ತೆಂಗಿನ ಮರಗಳನ್ನು ನೆಟ್ಟಿದ್ದಾರೆ. ಅಲ್ದೇ ತಿಮ್ಮಾಪುರ ತಾಂಡದ ಹೊರವಲಯದಲ್ಲಿ ಕುರಿ ಶೆಡ್ ಹಾಕಿಕೊಂಡು ಜೀವನ ಸಾಗಿಸ್ತಾ ಇದ್ರಂತೆ. ಆದ್ರೆ ಈ ಜಾಗ ಬಿಡುವಂತೆ ರಾಘವೇಂದ್ರ ಅವರ ದೊಡ್ಡಪ್ಪ ಹಾಗೂ ಚಿಕ್ಕಪ್ಪನ ಮಕ್ಕಳು ಬಿಟ್ಟುಕೊಡುವಂತೆ ಗಲಾಟೆ ಮಾಡಿದ್ದು, ಸುಮಾರು 15 ರಿಂದ 20 ಮಂದಿ ರಾಘವೇಂದ್ರ ನಾಯ್ಕ್ ನ ಮುಖ ಮೂತಿ ಅಂತಾನೂ ನೋಡದೇ ಕಲ್ಲು- ದೊಣ್ಣೆಗಳಿಂದ ರಕ್ತ ಬರುವಂತೆ ಹೊಡೆದಿದ್ದಾರೆ.
ಈ ಜಮೀನು ವಿವಾದ ಸಂಬಂಧ ಕೋರ್ಟ್ ನಲ್ಲಿ ವಿಚಾರಣೆ ಕೂಡ ನಡೆಯುತ್ತಿದ್ದು, ಫೀರಮ್ಮನ ಮೊಮ್ಮಗ ರಾಘವೇಂದ್ರ ನಾಯ್ಕ್ ಕೋರ್ಟ್ಗೆ ಹೋಗ್ತಾ ಇದ್ರಂತೆ. ಹೀಗಾಗಿ ಪದೇ ಪದೇ ಕೋರ್ಟ್ಗೆ ಹೋಗ್ತೀಯಾ ಅಂತಾ ಸಹೋದರರಾದ ದೇವರಾಜ್ ನಾಯ್ಕ್, ಸತೀಶ್ ನಾಯ್ಕ್,ಲೋಕೇಶ್ ನಾಯ್ಕ್ ಎಂಬುವವರು ಗುಂಪು ಕಟ್ಟಿಕೊಂಡು ರಾಘವೇಂದ್ರ ನಾಯ್ಕ್ ಮೇಲೆ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ, ಈ ವೇಳೆ ರಾಘವೇಂದ್ರ ನಾಯ್ಕ್ ತಾಯಿ ನಾಗಮ್ಮ ತಲೆಗೆ ಬಲವಾಗಿ ಹೊಡೆದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಜಾಗಕ್ಕಾಗಿ ದೇವರಾಜ್ ನಾಯ್ಕ್ ಹಾಗೂ ಸತೀಶ್ ನಾಯ್ಕ್ ಎಂಬುವವರು ಸೇರಿಕೊಂಡು ರಾಘವೇಂದ್ರನನ್ನು ಕೊಲೆ ಮಾಡಲು ಯತ್ನಿಸಿದ್ದು, ಕೊಲೆ ಮಾಡಿಯೇ ತೀರುತ್ತೇವೆ ಎಂದು 20 ಜನರನ್ನು ಸೇರಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ನಮಗೆ ಜೀವ ಬೆದರಿಕೆ ಇದೆ, ನಮಗೆ ರಕ್ಷಣೆ ಕೊಡಿ ಎಂದು ರಾಘವೇಂದ್ರ ನಾಯ್ಕ್ ಮನವಿ ಮಾಡಿದ್ರು.
ಇನ್ನು, ಈ ಜಾಗವು ನಮಗೆ ಸೇರಿದ್ದು ನಮಗೆ ಬಿಟ್ಟು ಕೊಡುವಂತೆ ರಾಘವೇಂದ್ರ ಅವರ ದೊಡ್ಡಪ್ಪನ ಮಗನಾದ ಲೋಕೇಶ್ ನಾಯ್ಕ್ ಹೇಳಿದ್ದಾರಂತೆ. ಆದ್ರೆ ಅವರು ಜಮೀನು ಬಿಟ್ಟುಕೊಟ್ಟಿಲ್ಲ, ಅದಕ್ಕೆ ನಾವು ತೆಂಗಿನ ಮರಗಳ ಗರಿಗಳನ್ನು ಕತ್ತರಿಸಿ ಉಳುಮೆ ಮಾಡಿಕೊಂಡಿದ್ದೇವೆ, ನಾವು ಹಲ್ಲೆ ಮಾಡಿಲ್ಲ ಅವರೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಲೋಕೇಶ್ ನಾಯ್ಕ್ ಪ್ರತ್ಯಾರೋಪ ಮಾಡ್ತಾ ಇದ್ದಾರೆ.
ಅದೇನೆ ಆಗಲಿ ಜಮೀನು ವಿವಾದ ಸಂಬಂಧ ಅಣ್ಣ- ತಮ್ಮಂದಿರು ಅನ್ನೋದನ್ನು ನೋಡದೇ ಹಲ್ಲೆ ಮಾಡಿರೋದು ದುರಂತವೇ ಸರಿ. ಸದ್ಯ ಈ ಸಂಬಂಧವಾಗಿ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.