Bangalore : ಗಾಳಿ ಮಳೆಯಿಂದ ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ ಗಾಯ

BANGALORE: ರಾಜ್ಯದ ಹಲವೆಡೆ ಮೋಡಮುತ್ತಿದ ವಾತಾವರಣದ ನಡುವೆಯೇ ಬಾರೀ ಮಳೆಯ ರಭಸಕ್ಕೆ ಅನಾಹುತಗಳು ಸಂಭವಿಸುತ್ತಿದ್ದು, ಬೆಂಗಳೂರು ನಗರದ ಬಸವನಗುಡಿಯ (Basavanagudi) ಬ್ರಹ್ಮ ಚೈತನ್ಯ ಮಂದಿರದ ಬಳಿ ಗಾಳಿ ಮಳೆಯಿಂದ ಮರದ ಕೊಂಬೆ ಮುರಿದು ಬಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ದೋಬಿ ಘಾಟ್ ಬೃಂದಾವನ ನಗರದ ನಿವಾಸಿಯಾಗಿರುವ ಅಕ್ಷಯ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮರದ ಕೊಂಬೆ ಸರಿಸಿ ಅಕ್ಷಯನ್ ರಕ್ಷಿಸಲು ಕೆಲ ಸಮಯ ಹಿಡಿದಿದೆ. ಸ್ಥಳೀಯರು ಅಕ್ಷಯ್‌ನ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಾಯದ ಪ್ರಮಾಣ ಹಾಗೂ ರಕ್ರ ಸ್ರಾವ ಹೆಚ್ಚಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅಕ್ಷಯ್ ಕುಟುಂಬದವರು ಮಧ್ಯಮ ವರ್ಗದವರಾಗಿದ್ದು, ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಹಿಂಜರಿಯುತ್ತಿದ್ದಾರೆ. ಚಿಕಿತ್ಸೆಗಾಗಿ ಬೇಕಾದ ಹಣವನ್ನು ವ್ಯವಸ್ಥೆ ಮಾಡಲು ಆರ್ಥಿಕ ನೆರವು ಬೇಕಾಗಿರುವ ಪರಿಸ್ಥಿತಿಯು ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

 

Author:

...
Sushmitha N

Copy Editor

prajashakthi tv

share
No Reviews