MADHUGIRI : ಅರಣ್ಯ ಬೆಳೆಸಲು ಮಕ್ಕಳು ಮುಂದಾಗಬೇಕು | ಪರಿಸರ ದಿನಾಚರಣೆಯಲ್ಲಿಆರ್.ರಾಜೇಂದ್ರಕರೆ

MADHUGIRI NEWS : ಪರಿಸರವಿಲ್ಲದೆ ಮನುಕುಲ ಬದುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಕ್ಕಳು ಅರಣ್ಯ ಬೆಳೆಸಲು ಮುಂದಾಗಬೇಕು ಎಂದು ವಿ.ಪ ಸದಸ್ಯ ಆರ್.ರಾಜೇಂದ್ರ ಮಧುಗಿರಿಯಲ್ಲಿತಿಳಿಸಿದ್ರು.

ಪಟ್ಟಣದ ಬೈ ಪಾಸ್‌ನಲ್ಲಿ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಚ್ಛ ಪ್ರಕೃತಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ರಹದಾರಿ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಮುಂದಾಗ ಬೇಕಿದ್ದು, ಹಂತ ಹಂತವಾಗಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಬೇಕು. ಇದು ಉತ್ತಮ ಪರಿಸರ ನಿರ್ಮಾಣಕ್ಕೆ ಮೊದಲ ಹೆಜ್ಜೆಯಾಗಲಿದೆ. ಇಂದಿನ ಮಕ್ಕಳಿಗೆ ಅರಣ್ಯದ ಮಹತ್ವವನ್ನು ತಿಳಿಸಲು ನಮ್ಮಲ್ಲಿರುವ ತಿಮ್ಮಲಾಪುರ ಅರಣ್ಯದ ಕರಡಿಧಾಮ, ಕೃಷ್ಣಮೃಗದ ಮೈದನಹಳ್ಳಿ ಅರಣ್ಯಕ್ಕೆ ಮಕ್ಕಳನ್ನು ಕರೆದೊಯ್ದು ಜಾಗೃತಿ ಮೂಡಿಸಬೇಕು ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಮಲ್ಲಿಕಾರ್ಜುನ್‌ ಮಾತನಾಡಿ, 1973 ರಿಂದ ವಿಶ್ವಸಂಸ್ಥೆ ಹಾಗೂ ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಜೂ.5 ರಂತೆ ವಿಶ್ವ ಪರಿಸರ ದಿನಾಚರಣೆ ನಡೆಸಲಾಗುತ್ತಿದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರಿಸರ ಎಂಬ ದ್ಯೇಯವಾಕ್ಯವಾಗಿದೆಎಂದರು. ಇದೇವೇಳೆಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮ, ಹಾಗೂ ಪ್ರಬಂಧ ಸ್ಪರ್ಧೆ, ಚಿತ್ರಕಲಾ, ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರಿನ್‌ತಾಜ್, ಸಿಪಿಐ ಹನುಮಂತರಾಯಪ್ಪ, ತುಮುಲ್ ನಿರ್ದೇಶಕ ನಾಗೇಶ್ ಬಾಬು, ಬಿಇಒ ಹನುಮಂತರಾಯಪ್ಪ, ಸಾಮಾಜಿಕ ಅರಣ್ಯ ಇಲಾಖೆ, ಶೈಲಜಾ ವಲಯ ಅರಣ್ಯ ಇಲಾಖೆಯ ಮುತ್ತುರಾಜ್, ಸುರೇಶ್ ಹಾಜರಿದ್ರು.

Author:

...
Keerthana J

Copy Editor

prajashakthi tv

share
No Reviews