TUMAKURU : ಕಿಚ್ಚು ಹೊತ್ತಿಕೊಂಡಿರೋ ಹೇಮೆ ಹೋರಾಟವನ್ನು ಶಾಂತಗೊಳಿಸುತ್ತಾರಾ ಪರಂ..?

TUMAKURU NEWS : ತುಮಕೂರಿನಲ್ಲಿ ಹೇಮೆ ಹೋರಾಟದ ಸಂಬಂಧವಾಗಿ ಸ್ವಾಮೀಜಿಗಳ ವಿರುದ್ಧ ದಾಖಲಾದ ಎಫ್‌ಐಆರ್ ಈಗ ಹೊಸ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ತುಮಕೂರಿನ ಹೇಮೆ ಹೋರಾಟದ ಸಂದರ್ಭದಲ್ಲಿ ಸ್ವಾಮೀಜಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ ಈ ಪ್ರಕರಣ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

"ಸ್ವಾಮೀಜಿಗಳ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಪರಿಶೀಲಿಸಿ, ಅವಶ್ಯಕತೆ ಇದ್ದರೆ ವಾಪಸ್ ತೆಗೆಯಲು ಸೂಚಿಸಿದ್ದೇನೆ. ಬಸ್ ಗೆ ಕಲ್ಲು ಹೊಡೆದ ಪ್ರಕರಣದಲ್ಲಿ ಇತರರ ಪಾತ್ರವಿದೆ ಎಂದು ಮಾಹಿತಿ ಇದೆ. ಗಾಳಿ ಬಿಟ್ಟರು ಅನ್ನುವ ವಿಷಯವನ್ನೂ ಪರಿಶೀಲನೆ ಮಾಡುವಂತೆ ತಿಳಿಸಿದ್ದೇನೆ."

ಅದೇ ಸಮಯದಲ್ಲಿ ಗೃಹ ಸಚಿವರು ಪೊಲೀಸರ ಬಳಿ ಸಿಸಿಟಿವಿ ದೃಶ್ಯಾವಳಿ ಇರುವುದನ್ನು ತಿಳಿಸಿ, ಅದು ಪರಿಶೀಲಿಸಿ ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.

"ಸ್ವಾಮೀಜಿಗಳನ್ನು ಎಫ್‌ಐಆರ್ ನಲ್ಲಿ ಸೇರಿಸುವಂತಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಅವರು ಧರ್ಮದ ಪ್ರತಿನಿಧಿಗಳು. ಅವರಿಗೆ ಗೌರವ ನೀಡುವಂತ ಕೆಲಸ ಮಾಡಬೇಕು. ಅವರು ಹೋರಾಟಕ್ಕೆ ಕರೆದಿದ್ದಾರೆ, ಹಾಜರಾಗಿದ್ದಾರೆ. ಅದರಿಂದ ಈ ಪ್ರಕರಣವನ್ನು ಪುನರ್ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿಗೆ ಸೂಚನೆ ನೀಡಿದ್ದೇನೆ."

ಈ ಬೆನ್ನಲ್ಲೇ, ಸ್ಪಷ್ಟನೆ ನೀಡಿದ ಗೃಹ ಸಚಿವರು ಸ್ವಾಮೀಜಿಗಳ ವಿರುದ್ಧದ ಎಫ್‌ಐಆರ್ ವಿಚಾರ ಪುನರ್ ಪರಿಶೀಲನೆಗೆ ಬಾಗಿಲು ತೆರೆದಿದ್ದು, ಪ್ರಕರಣದಲ್ಲಿ ಮುಂದೇನು ಬೆಳವಣಿಗೆ ಆಗುತ್ತದೆ ಎಂಬುದನ್ನು ನಿರೀಕ್ಷಿಸಬೇಕಿದೆ.

 

 

Author:

...
Keerthana J

Copy Editor

prajashakthi tv

share
No Reviews