HASSAN NEWS : ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದ್ರೆ ಇರ್ತಾರೆ, ಆದ್ರೆ ಕೆಟ್ಟ ತಾಯಿ ಯಾವತ್ತು ಇರಳಾರಳು ಎಂಬ ಮಾತಿದೆ. ಆದ್ರೆ ಇಲ್ಲೊಬ್ಬ ಪಾಪಿ ತಾಯಿ ತನ್ನ ಕರುಳಬಳ್ಳಿಯನ್ನೇ ನಿರ್ದಯವಾಗಿ ಹತ್ಯೆ ಮಾಡಿರೋ ಪೈಶಾಚಿಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಹೌದು ಇನ್ನು ಚಿಕ್ಕ ಮಗು, ಪ್ರಪಂಚ ಏನು ಅನ್ನೋದೇ ಅರಿಯದ ಕಂದಮ್ಮ. ಅಪ್ಪ- ಅಮ್ಮನ ಜಗಳಕ್ಕೆ ಬಲಿಯಾಗಿದ್ದಾಳೆ. ಗಂಡ- ಹೆಂಡ್ತಿ ಗಲಾಟೆಯಿಂದ ತಂದೆಯ ಜೊತೆ ಮಗು ಇದ್ದು, ಆಗಾಗ್ಗ ತಾಯಿ ಬಂದು ನೋಡಿಕೊಂಡು ಹೋಗ್ತಾ ಇದ್ದಳು. ಮೂರು ದಿನದ ಹಿಂದೆ ಗಂಡನ ಮನೆಗೆ ಬಂದಿದ್ದ ಮಗುವನ್ನು ಕೊರೊದೊಯ್ದಿದ್ದ ತಾಯಿ, ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಆಡಿದ್ದಾಳೆ.
ಬೆಂಗಳೂರಿನ ನೆಲಮಂಗಲದಲ್ಲಿ ನೆಲೆಸಿದ್ದ ಗಂಡ ರಘು ಮನೆಗೆ ಬಂದಿದ್ದ ಶ್ವೇತಾ, ನೈಟ್ ಡ್ರಸ್ ನಲ್ಲೇ ಮಗುವನ್ನು ಕರೆದೊಯ್ದಿದ್ದಾಳೆ. ಮಗು ಅತ್ತು, ಕಿರುಚಾಡಿದೆ. ಅಪ್ಪ ಅಪ್ಪಾ ಅಂತಾ ಕಿರುಚಾಡಿದೆ. ಆದ್ರೆ ತಾಯಿ ಶ್ವೇತಾ ಮನೆಯಲ್ಲಿ ಅತ್ತೆ, ಗಂಡ ಇದ್ರು ಕೇರ್ ಮಾಡದೇ ಮಗುವನ್ನು ಮೂರು ದಿನ ಹಿಂದೆ ಹಾಸನಕ್ಕೆ ಕರೆದೊಯ್ದಿದ್ದಳು. ಗಂಡನ ಮೇಲಿನ ಸಿಟ್ಟೋ ಅಥವಾ ಕೌಟುಂಬಿಕ ಕಲಹಕ್ಕೋ ತಾನೇ ಹೊತ್ತು, ಹೆತ್ತು ಸಾಕಿದ ಮಗಳನ್ನೇ ಪಾಪಿ ತಾಯಿ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಆಡಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಅದೇನೆ ಆಗಲಿ ಗಂಡ- ಹೆಂಡ್ತಿ ಮಧ್ಯೆ ಜಗಳ ಇದ್ರೆ ಅದನ್ನ ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕಿತ್ತು. ಬದಲಾಗಿ ತನ್ನ ಕರುಳಬಳ್ಳಿಗೆ ಶಿಕ್ಷೆ ನೀಡಿದ್ದು ದುರಂತವೇ ಸರಿ. ತನ್ನ ಮಗಳನ್ನೇ ಕೊಂದು ಕೆಟ್ಟ ತಾಯಿ ಎಂಬ ಕಳಂಕವನ್ನು ಹೊತ್ತು ಜೈಲಿಗೆ ಹೋಗಿದ್ದು ಮಾತ್ರ ವಿಪರ್ಯಾಸ.