SIRA : ಭಗೀರಥ ಮಹರ್ಷಿ ಜಯಂತಿ | ಟಿ.ಬಿ.ಜಯಚಂದ್ರ ಹೇಳಿದ್ದೇನು?

SIRA NEWS : ಉಪ್ಪಾರ ಸಮಾಜ ಸ್ವಹಿತಕ್ಕಿಂತಲೂ ಸರ್ವರ ಹಿತವನ್ನು ಬಯಸುವ ಸಮಾಜವಾಗಿದೆ. ನಾನು ಸತತ 30 ವರ್ಷಗಳ ಕಾಲ ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಬೆಳವಣಿಗೆಯ ಕಾಲದಲ್ಲಿ ನನ್ನ ಕೈಹಿಡಿದವರು ಉಪ್ಪಾರ ಸಮಾಜದವರು ಎಂದು ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಡಾ.ಟಿ.ಬಿ.ಜಯಚಂದ್ರ ಶಿರಾದಲ್ಲಿ ತಿಳಿಸಿದರು.

ಶಿರಾ ನಗರದಲ್ಲಿ ನಡದ ಭಗೀರಥ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗೀರಥ ಕೇವಲ ಉಪ್ಪಾರ ಸಮಾಜದ ಕುಲಗುರು ಮಾತ್ರವಲ್ಲ. ಈ ದೇವಋಷಿಯಾಗಿ ಇಡೀ ಮನುಕುಲಕ್ಕೆ ದೇವಗಂಗೆ ಹರಿಸಿ, ಸಮಸ್ತ ಜೀವಸಂಕುಲದ ಮಹಾನ್‌ ಚೇತನವಾಗಿದ್ದು ನಮ್ಮೆಲ್ಲರ ಆದರ್ಶವಾಗಿದ್ದಾರೆ. ನಾನು 10 ಸಾರ್ವಜನಿಕ ಚುನಾವಣೆ ನೋಡಿದ್ದೇನೆ. 7 ಚುನಾವಣೆಯಲ್ಲಿ ಉಪ್ಪಾರ ಸಮಾಜದ ಸಿದ್ದೇಗೌಡರೇ ಹಣವನ್ನ ಕಲೆಕ್ಟ್‌ ಮಾಡಿ ಚುನಾವಣೆ ನಡೆಸಿದ್ರು. ಈ ರೀತಿಯ ಜನರ ಬಳಿ ಬೇಡಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದೇ ಉಪ್ಪಾರ ಸಮಾಜದ ವ್ಯಕ್ತಿಗಳು ಎಂದರು.

ಇನ್ನು ಶಿರಾ ನಗರಾದ್ಯಂತ ಜಯಂತ್ಯುತ್ಸವ ಅಂಗವಾಗಿ ಶ್ರೀ ಭಗೀರಥ ಭಾವಚಿತ್ರದ ಭವ್ಯ ಮೆರವಣಿಗೆಗೆ ನಗರದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಚಾಮರ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಭದ್ರ ಕುಣಿತ ಸೇರಿದಂತೆ ನಾನಾ ಕಲಾ ತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ನೂರಕ್ಕೂ ಹೆಚ್ಚು ಮಂದಿ ಸಮಾಜದ ಬಾಂಧವರು, ಧ್ವಜಗಳನ್ನು ಹಿಡಿದು ವಾದ್ಯದ ತಾಳಕ್ಕೆ ಹೆಜ್ಜೆ ಹಾಕಿದ್ರು. ಹಲವು ಮಂದಿ ಬೈಕ್‌ ರ್ಯಾಲಿ ನಡೆಸುವ ಮೂಲಕ ಗಮನ ಸೆಳೆದ್ರು. ಸ್ತಬ್ಧಚಿತ್ರದಲ್ಲಿ ಭಗೀರಥ ವೇಷಧಾರಿ ಶಿವನನ್ನು ಕುರಿತು ತಪಸ್ಸು ಮಾಡುವ, ಗಂಗೆಯನ್ನು ಧರೆಗೆ ತರುವ ದೃಶ್ಯವನ್ನು ಅಭಿನಯಿಸಿ, ನೃತ್ಯ ಮಾಡಿದ್ದು ನೋಡುಗರ ಗಮನಸೆಳೆಯಿತು.

ಈ ಸಂದರ್ಭದಲ್ಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರು, ಸೇರಿದಂತೆ ಜನಾಂಗದ ವಿವಿಧ ಉನ್ನತ ಅಧಿಕಾರಿಗಳು, ತಾಲೂಕಿನ ರಾಜಕೀಯ ಪಕ್ಷಗಳು ಮುಖಂಡರು ಹಾಜರಿದ್ರು.

Author:

...
Keerthana J

Copy Editor

prajashakthi tv

share
No Reviews