ಪಾವಗಡ : ಸೋಲಾರ್ ಪ್ಲಾಂಟ್ ನಿಂದ ಡಿಸಿ ಕೇಬಲ್ ಕಳ್ಳತನ | ಇಬ್ಬರು ಆರೋಪಿಗಳ ಬಂಧನ

ಪಾವಗಡ : ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ವಳ್ಳೂರು ಗ್ರಾಮದ ಅವಧಾ ಸೋಲಾರ್ ಪ್ಲಾಂಟ್‌ನಲ್ಲಿ ಅಳವಡಿಸಲಾಗಿದ್ದ ಸುಮಾರು 2,500 ಮೀಟರ್‌ ಡಿಸಿ ಕೇಬಲ್ ವೈರ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ತಿರುಮಣಿ ಪೊಲೀಸರು ಬಂಧಿಸಿದ್ದಾರೆ.

ಪಾವಗಡದ ನಿವಾಸಿಗಳಾದ ಮಲ್ಲೇಶ್‌, ಬಾಬು ಅಲಿಯಾಸ್‌ ಬಾಬುರಾವ್‌ ಮತ್ತು ಮಂಜ ಅಲಿಯಾಸ್‌ ಅಣ್ಣಪ್ಪ ಎಂಬ ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ನಾಗರಾಜ್‌ ಎಂಬಾತ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು ₹2 ಲಕ್ಷ ಮೌಲ್ಯದ ಡಿಸಿ ಕೇಬಲ್, ಜೊತೆಗೆ ಎರಡು ಟಿವಿಎಸ್ ಎಕ್ಸ್‌ಎಲ್ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ತನಿಖೆ ವೇಳೆ ಆರೋಪಿಗಳು ಪಾವಗಡ ತಾಲೂಕಿನ ಹಲವು ಕಡೆ ಕಳ್ಳತನ ಎಸಗಿರುವುದು ತಿಳಿದುಬಂದಿದೆ. ಸದ್ಯ ಈ ಸಂಬಂಧ ತಿರುಮಣಿ ಪೊಲೀಶ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಈ ಕಾರ್ಯಕ್ಕೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಕೆ.ವಿ ಅಶೋಕ್‌ ಅವರು ಪ್ರಶಂಸಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews