MADHUGIRI: ಪರಸ್ಪರ ಕೊಂಡಾಡಿಕೊಂಡ ರಾಜೇಂದ್ರ ರಾಜಣ್ಣ- ಹೆಚ್‌.ವಿ ವೆಂಕಟೇಶ್

ಮಧುಗಿರಿ:

ತುಮುಲ್ಚುನಾವಣೆ ಬಗ್ಗೆ ವಿಧಾನ ಪರಿಷತ್ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ತುಮುಲ್ಅಧ್ಯಕ್ಷ ಹೆಚ್‌.ವಿ ವೆಂಕಟೇಶ್ಪರಸ್ಪರ ಕೊಂಡಾಡಿಕೊಂಡಿದ್ದಾರೆ. ಮಧುಗಿರಿ ಪಟ್ಟಣದ ಹಾಲು ಶಿಥಲಿಕರಣ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ತುಮುಲ್ಅಧ್ಯಕ್ಷ ಹೆಚ್‌.ವಿ ವೆಂಕಟೇಶ್ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ರಾಜೇಂದ್ರ ರಾಜಣ್ಣ, ಪಾವಗಡ ಶಾಸಕ ಹೆಚ್‌. ವಿ ವೆಂಕಟೇಶ್ ಅವರಿಗೆ ತುಮುಲ್ ಅಧ್ಯಕ್ಷ ಪಟ್ಟ ಒಲಿದಿದ್ದು ಜಾಕ್ಫಾಟ್ಆಗಿದೆ ಎಂದು ಕೊಂಡಾಡಿದ್ರು.

ಇನ್ನು ಈ ವೇಳೆ ಮಾತನಾಡಿದ ಹೆಚ್‌.ವಿ ವೆಂಕಟೇಶ್‌, ತುಮುಲ್ ಅಧ್ಯಕ್ಷ ಸ್ಥಾನದ ಆಕ್ಷಾಂಕ್ಷಿ ನಾನು ಆಗಿರಲಿಲ್ಲ. ಆದ್ರೆ ಮುಖ್ಯಮಂತ್ರಿಗಳು , ಸಹಕಾರ ಸಚಿವರು , ಗೃಹ ಸಚಿವರು ನನ್ನನ್ನು  ಸ್ಥಾನಕ್ಕೆ ಅಧ್ಯಕ್ಷನಾಗಿ ಮಾಡಿದ್ದಾರೆ.ಈ ಕಾರ್ಯಕ್ರಮಕ್ಕೆ ನನ್ನರಾಜಕೀಯ ಗುರುಗಳು ಬರಬೇಕಿತ್ತು ನಾನು ಅಧ್ಯಕ್ಷನಾದ ನಂತರ ಇದುವರೆಗೂ ಅವರೊಂದಿಗೆ ವೇದಿಕೆ ಜೊತೆಯಲ್ಲಿ ಕೂತಿಲ್ಲ ಮುಂದಿನ ದಿನಗಳಲ್ಲಿ ಅವರ ಜೊತೆ ವೇದಿಕೆಯಲ್ಲಿ ಕೂರಬೇಕೆಂಬ ಆಸೆ ಇದೆ ಎಂದು ಹೇಳಿದ್ರು.

 

Author:

...
Sub Editor

ManyaSoft Admin

share
No Reviews