SIRA NEWS : ಶಿರಾ ನಗರದಲ್ಲಿ ಕೆಲವು ಪಾರ್ಕ್ಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಪಾಳುಬಿದ್ದ ಕೊಂಪೆಗಳಾಗಿ ಬದಲಾಗುತ್ತಿದ್ದು, ಸಾರ್ಜನಿಕರು ಪಾರ್ಕ್ಗಳತ್ತ ಮುಖಾ ಮಾಡುತ್ತಿಲ್ಲ. ಕೂರಲು ಸರಿಯಾದ ಬೆಂಚ್ಗಳಿಲ್ಲದೆ ಹಿರಿಯರು,ಮಕ್ಕಳು ಪರದಾಡುತ್ತಿದ್ದಾರೆ. ಯುವಕ ಯುವತಿಯರ ಮೋಜಿನ ತಾಣವಾಗಿ ಬದಲಾಗ್ತಿವೆ ಪಾರ್ಕ್ಗಳು. ಇತ್ತ ಇದಕ್ಕೆ ಪೂರಕವಾಗಿ ಅಂಬೇಡ್ಕರ್ ಪಾರ್ಕ್ ಕೂಡ ಇದಕ್ಕೆ ಹೊರತಾಗಿಲ್ಲ ಅಂತಾ ಸುದ್ಧಿ ಬಿತ್ತರ ಮಾಡಿತ್ತು ಪ್ರಜಾಶಕ್ತಿ ಟಿವಿ, ವರದಿಗೆ ಎಚ್ಚೆತ್ತ ಅಧಿಕಾರಿಗಳು ಪಾರ್ಕನ್ನು ಪುಲ್ ಕ್ಲೀನ್ ಮಾಡುವ ಕೆಲಸ ಮಾಡಿಸಿದ್ದಾರೆ.
ಪ್ರಜಾಶಕ್ತಿ ಟಿವಿಯು ಮಹಾನ್ ಮಾನವತವಾದಿ ಡಾ.ಬಿ.ಆರ್. ಅಂಬೇಡ್ಕರ್ ಪಾರ್ಕ್ನ ಅವ್ಯವಸ್ಥೆಯ ಕುರಿತಾಗಿ ಸವಿಸ್ತಾರವಾಗಿ ವರದಿ ಬಿತ್ತರ ಮಾಡಿತ್ತು. ವರದಿ ಮಾಡಿ ಅಧಿಕಾರಿಗಳ ಗಮನಕ್ಕೂ ತಂದಿತ್ತು. ಈ ವೇಳೆ ದಲಿತ ಮುಖಂಡರು ಕೂಡ ಮಾತನಾಡಿ ಆಕ್ರೋಶ ಹೊರಹಾಕಿದ್ರು. ಇದೀಗ ಈ ನಿಮ್ಮ ಪ್ರಜಾಶಕ್ತಿ ಟಿವಿಯ ವರದಿಗೆ ಎಚ್ಚೆತ್ತ ಅಧಿಕಾರಿಗಳು ಪಾರ್ಕ್ ಸ್ವಚ್ಚಗೊಳಿಸಲು ಮುಂದಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ನಗರಸಭೆಯ ಸಿಬ್ಬಂದಿ ಪಾರ್ಕನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ರು.
ಇನ್ನು ನಗರಸಭೆಯ ಪೌರ ಕಾರ್ಮಿಕ ಸಿಬ್ಬಂದಿ ಪಾರ್ಕನಲ್ಲಿದ್ದ ಕಸವನ್ನು ತೆಗೆದು ಟ್ರ್ಯಾಕ್ಟರ್ಗೆ ಕಸ ತುಂಬಿಸಿ ಹೊರಸಾಗಿಸಿದ್ರು. ಅಧಿಕಾರಿ ಗಳ ಕಣ್ಣು ತೆರೆಸಿ ಕಸ ಸ್ವಚ್ಛ ಮಾಡಿಸಿದ್ದಕ್ಕೆ ದಲಿತ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಪ್ರಜಾಶಕ್ತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್