CHIKKABALLAPURA : ಪ್ರೀತಿಗೆ ಪೋಷಕರ ವಿರೋಧ | ಠಾಣೆಯಲ್ಲೇ ಪ್ರೇಮಿಗಳ ಮದುವೆ

CHIKKABALLAPURA NEWS : ಹೀಗೇ ಪೊಲೀಸ್ ಠಾಣೆ ಮುಂಭಾಗ ಪ್ರೀತಿಸಿ ಮದುವೆಯಾಗಿರೋ ಪ್ರೇಮಿಗಳ ರಕ್ಷಣೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳು…ಪೋಷಕರ ವಿರೋಧದ ನಡುವೆಯೂ ಹಾರ ಬದಲಾಯಿಸಿಕೊಂಡು ಮದುವೆಯಾದ ನವಜೋಡಿ…ಮದುವೆಯಾದ ನವಜೋಡಿಗೆ ಜೀವನದ ಪಾಠ ಮಾಡುತ್ತಿರುವ ಅಧಿಕಾರಿಗಳು..ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪೊಲೀಸ್ ಠಾಣೆಯ ಬಳಿ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹಳೆ ಉಪ್ಪರಹಳ್ಳಿ ಗ್ರಾಮದ ದಿವ್ಯಶ್ರೀ ಎಂಬ ಯುವತಿಗೆ ಗುಡಿಬಂಡೆ ತಾಲೂಕಿನ ಗದಂನಾಗೇನಹಳ್ಳಿ ಗ್ರಾಮದ ಮುನಿ ಆಂಜನೇಯ ಎಂಬ ಯುವಕನ ಪರಿಚಯವಾಗಿತ್ತು. ಯುವತಿ ದಿವ್ಯಶ್ರೀ ಡಿಗ್ರಿಯನ್ನ ಓದ್ತಾ ಇದ್ರೆ, ಮುನಿಆಂಜನೇಯ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದ. ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಹೀಗಾಗಿ ಕಳೆದ ಒಂದು ವರ್ಷದಿಂದ ಇವರಿಬ್ಬರು ಕೈಕೈ ಹಿಡಿದು ಸುತ್ತಾಡಿದ್ರು. ಕೊನೆಗೆ ಮದುವೆಯಾಗುವ ನಿರ್ಧಾರಕ್ಕೂ ಬಂದಿದ್ರು. ಆದ್ರೆ ಜಾತಿಯ ಕಾರಣಕ್ಕೆ ಪೋಷಕರು ಈ ಮದುವೆಗೆ ಒಪ್ಪಿರಲಿಲ್ಲ, ಹೀಗಾಗಿ ಈ ಪ್ರೇಮಿಗಳು ಮನೆಬಿಟ್ಟು ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ರು. ಈ ನಡುವೆ ಹುಡುಗಿ ಪೊ಼ಕರು ಗೌರಿಬಿದನೂರು ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಕಂಪ್ಲೆಂಟ್‌ ಕೂಡ ದಾಖಲಿಸಿದ್ರು.

ಇದಾಗ್ತಿದ್ದಂತೆ ಹುಡುಗ, ಹುಡುಗಿ ಗುಡಿಬಂಡೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್‌ ಮ್ಯಾರೇಜ್‌ ಮಾಡಿಕೊಳ್ಳಲು ಮುಂದಾಗಿದ್ರು. ಇನ್ನು ವಿವಾಹ ನೋಂದಣಿಗೆ ಆಗಮಿಸುತ್ತಿದ್ದಂತೆ ಅದೇ ಕಚೇರಿಯ ಆವರಣದಲ್ಲಿದ್ದ ಯುವತಿ ಸಂಬಂಧಿಕರು ಆಕೆಯನ್ನ ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾಗ್ತಿದ್ದಂತೆ ಯುವತಿ ರಾದ್ಧಾಂತ ಮಾಡಿದ್ದು, ಇದನ್ನ ಕಂಡ ಸ್ಥಳೀಯರು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ರು.

ಆದ್ರೆ ಪೊಲೀಸರು ಮಧ್ಯಪ್ರವೇಶಿಸಿ ಪ್ರೇಮಿಗಳಿಬ್ಬರನ್ನ ಒಂದು ಮಾಡಲು ಹಿಂದೇಟು ಹಾಕಿದ ಹಿನ್ನೆಲೆ ದಲಿತಪರ ಸಂಘಟನೆ ಮುಖಂಡರು ಅಂತರ್ಜಾತಿ ವಿವಾಹ ಮಾಡಲು ಪೊಲೀಸರು ವಿರೋಧ ವ್ಯಕ್ಯಪಡಿಸುತ್ತಿದ್ದಾರೆಂದು ಆರೋಪಿಸಿ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ರು.

ಗುಡಿಬಂಡೆ ಪೊಲೀಸ್ ಠಾಣೆ ಬಳಿ ದಲಿತ ಸಂಘಟನೆಗಳ ಪ್ರತಿಭಟನೆ ಜೋರಾಗುತ್ತಿದಂತೆ ಸ್ಥಳಕ್ಕೆ ಭೇಟಿ ಕೊಟ್ಟ ಗುಡಿಬಂಡೆ ತಹಶೀಲ್ದಾರ್ ಸಿಗ್ಬತ್ ವುಲ್ಲಾ ಹಾಗೂ ಗುಡಿಬಂಡೆ  ಪೊಲೀಸರು, ಎರಡು ಕುಟುಂಬಗಳನ್ನು ಠಾಣೆಗೆ ಕರೆಸಿಕೊಂಡು ಪ್ರೀತಿಗೆ ಒಪ್ಪಿಗೆ ಕೊಡಲು ಸೂಚಿಸಿದ್ರು. ಆದ್ರೆ ದಿವ್ಯಶ್ರೀ ಪೋಷಕರು ಈ ವಿವಾಹಕ್ಕೆ ಬಿಲ್ ಕುಲ್ ಒಪ್ಪದ ಹಿನ್ನೆಲೆ ಯುವಕ ಯುವತಿಯ ಹೇಳಿಕೆ ಪಡೆದು ಹೂಹಾರವನ್ನು ಬದಲಾಯಿಸಿ ನಂತರ ರಿಜಿಸ್ಟರ್ ಮ್ಯಾರೇಜ್ ಮಾಡಿಸಿ ನೂತನ ವಧುವರರಿಗೆ ಶುಭಕೋರಿದ್ರು.

ಒಟ್ಟಾರೇ ಪ್ರೀತಿಯಲ್ಲಿ ಬಿದ್ದು ಕನಸು ಕಟ್ಟುಕೊಂಡಿದ್ದ ನವಜೋಡಿ ಪೋಷಕರ ವಿರೋಧ, ಪ್ರಾಣಬೆದರಿಕೆಯ ನಡುವೆಯೂ ಪೊಲೀಸರ ನೆರವಿನೊಂದಿಗೆ ಒಂದಾಗಿದ್ದು, ನವಜೀವನಕ್ಕೆ ಕಾಲಿಟ್ಟಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews