Newdelhi : ಇಂದು ಉಡಾವಣೆಯಾಗಬೇಕಿದ್ದ ಬಾಹ್ಯಾಕಾಶಯಾನ ನಾಳೆಗೆ ಮುಂದೂಡಿಕೆ..!

NEWDELHI : ಇಂದು ಉಡಾವಣೆಯಾಗಬೇಕಿದ್ದ ಬಾಹ್ಯಾಕಾಶಕ್ಕೆ ಹೋಗಬೇಕಿದ್ದ ಉಡಾವಣೆಯನ್ನು ಹವಾಮಾನ ಪರಿಸ್ಥಿತಿಗಳ ಕಾರಣದಿಂದಾಗಿ ಜೂನ್‌ 11 ಕ್ಕೆ ಮುಂದೂಡಲಾಗಿದೆ. ನಾಳೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಮೂಲಕ ಆಕ್ಸಿಯಮ್-4 (Axiom-4) ಬಾಹ್ಯಾಕಾಶ ಮಿಷನ್ ಉಡಾವಣೆಗೊಳ್ಳಲಿದೆ.

ಗಗನಯಾತ್ರಿ ಅಥವಾ ನಿಯೋಜಿತ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಜೂನ್‌ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ. ಶುಕ್ಲಾ ಅವರೊಂದಿಗೆ ಮೂವರು ಗಗನಯಾನಿಗಳು ಸಹ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಪ್ರಯಾಣ ಬೆಳೆಸಲಿದ್ದಾರೆ.

ISS (ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ) ನಲ್ಲಿ 14 ದಿನಗಳ ಕಾಲ ವಿಜ್ಞಾನ ಪ್ರಯೋಗಗಳನ್ನು ನಡೆಸಲಿದ್ದಾರೆ. ಈ ಮೂಲಕ ಭಾರತವು 41 ವರ್ಷಗಳ ನಂತರ ISS ನಲ್ಲಿ ಮಾನವ ಬಾಹ್ಯಯಾನವನ್ನು ಪುನಃ ಆರಂಭಿಸಲಿದೆ. ಈ ಉಡಾವಣೆಯು ಭಾರತದ ಬಾಹ್ಯಯಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ

Author:

...
Sushmitha N

Copy Editor

prajashakthi tv

share
No Reviews