Newdelhi : ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು | ಜೂನ್ 10ರಂದು ಬಾಹ್ಯಾಕಾಶ ಯಾನ

NEWDELHI : ಭಾರತ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ. 1984ರ ರಾಕೇಶ್ ಶರ್ಮಾ ಅವರ ನಂತರ, 41 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ಬಾಹ್ಯಾಕಾಶ ಯಾನಕ್ಕೆ ಕಳಿಸಲು ಸಜ್ಜಾಗುತ್ತಿದೆ. ಭಾರತದ ವಾಯುಪಡೆಯ ಅಧಿಕಾರಿ ಶುಭಾಂಶು ಶುಕ್ಲಾ ಅವರು ಜೂನ್ 10, 2025ರಂದು ಬಾಹ್ಯಾಕಾಶ ಯಾನ ಆರಂಭಿಸಲಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿ ಇರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ SpaceX ಸಂಸ್ಥೆಯ ʻಡ್ರ್ಯಾಗನ್ʼ ಗಗನನೌಕೆಯಲ್ಲಿ ಶುಕ್ಲಾ ಅವರು ಮೂವರು ಗಗನಯಾನಿಗಳೊಂದಿಗೆ ಪ್ರಯಾಣ ಆರಂಭಿಸಲಿದ್ದಾರೆ. ಈ ಮಿಷನ್ ʻಆ್ಯಕ್ಸಿಯಂ-4ʼ (Axiom Mission-4) ಹೆಸರಿನಲ್ಲಿ ಪ್ರಖ್ಯಾತವಾಗಿದೆ.

ನಾಸಾ ನೀಡಿರುವ ಮಾಹಿತಿಯಂತೆ, ಜೂನ್ 11ರ ತಡರಾತ್ರಿ 12.30ಕ್ಕೆ (ಭಾರತೀಯ ಸಮಯ ರಾತ್ರಿ 10.30) ʻಡ್ರ್ಯಾಗನ್ʼ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಯಶಸ್ವಿಯಾಗಿ ಜೋಡಣೆ (ಡಾಕಿಂಗ್) ಆಗಲಿದೆ. ಇನ್ನು ಇತ್ತೀಚೆಗಷ್ಟೇ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಅಮೆರಿಕಕ್ಕೆ ಭೇಟಿಯಾಗಿ ʻಆ್ಯಕ್ಸಿಯಂ-4ʼ ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.

1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ರಷ್ಯಾದ ಸೋಯುಜ್ ಟಿ-11 ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದವರು. ಅವರು ಭಾರತದ ಮೊದಲ ಗಗನಯಾತ್ರಿಕರಾಗಿದ್ದರು. ಈ ಘಟನೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವಪೂರ್ಣ ಅಧ್ಯಾಯವಾಯಿತು. ಇದೀಗ ಇಷ್ಟು ವರ್ಷಗಳ ಬಳಿಕ ಮತ್ತೊಬ್ಬ ಭಾರತೀಯ ಗಗನಯಾತ್ರಿಕನು ಬಾಹ್ಯಾಕಾಶಕ್ಕೆ ತೆರಳುತ್ತಿರುವುದು ರಾಷ್ಟ್ರದ ವಿಜ್ಞಾನ ಸಾಧನೆಗೆ ಸಾಕ್ಷಿಯಾಗುತ್ತಿದೆ

Author:

...
Sushmitha N

Copy Editor

prajashakthi tv

share
No Reviews