CRICKET NEWS : ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಮುನ್ನ ಟೀಮ್ ಇಂಡಿಯಾ ಸಿದ್ಧತೆಗಳು ಚುರುಕುಗೊಂಡಿರುವಾಗಲೇ, ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಾತ್ಕಾಲಿಕವಾಗಿ ಭಾರತಕ್ಕೆ ಮರಳಿದ್ದಾರೆ. ಗಂಭೀರ್ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನಲೆಯಲ್ಲಿ ಅವರು ತಂಡದಿಂದ ಹಿಂದೆ ಸರಿದಿದ್ದಾರೆ.
ಇದರಿಂದಾಗಿ ಟೀಮ್ ಇಂಡಿಯಾ ಅಭ್ಯಾಸಕ್ಕೆ ತಾತ್ಕಾಲಿಕ ವ್ಯತ್ಯಯ ಉಂಟಾದರೂ, ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಕ್ಷಣವೇ ತಂಡವನ್ನು ಕೂಡಿಕೊಂಡಿದ್ದಾರೆ. ಬಿಸಿಸಿಐನ ಸೂಚನೆಯಂತೆ ಅವರು ಲಂಡನ್ಗೆ ಪ್ರಯಾಣ ಮಾಡಿ, ಈಗಾಗಲೇ ಅಭ್ಯಾಸದಲ್ಲಿರುವ ಭಾರತ ತಂಡದ ಜೊತೆ ತಂತ್ರ ಚರ್ಚೆ ನಡೆಸುತ್ತಿದ್ದಾರೆ.
ಈ ಹಿಂದೆ ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಣ್, ಈ ಬಾರಿ ಕೂಡ ತಂಡದ ಪ್ರಮುಖ ಹೊಣೆ ಹೊತ್ತಿದ್ದಾರೆ. ಜೂನ್ 20ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಗೌತಮ್ ಗಂಭೀರ್ ಹಾಜರಾಗದ ಸಾಧ್ಯತೆಯ ಹಿನ್ನೆಲೆಯಲ್ಲಿ, ಭಾರತ ತಂಡವು ಲಕ್ಷ್ಮಣ್ ಅವರ ನೇತೃತ್ವದಲ್ಲಿಯೇ ತಂತ್ರ ರೂಪಿಸಲಿದೆ.
ಹೊಸ ನಾಯಕನಾಗಿ ಟೀಮ್ ಇಂಡಿಯಾ ಜವಾಬ್ದಾರಿ ಹೊತ್ತಿರುವ ಶುಭಮನ್ ಗಿಲ್ ನೇತೃತ್ವದಲ್ಲಿ, ತಂಡ ಲಂಡನ್ನಲ್ಲಿ ಅಭ್ಯಾಸ ಮುಂದುವರೆಸುತ್ತಿದೆ. ಟೀಮ್ ಇಂಡಿಯಾ ಮತ್ತು ಭಾರತ ಎ ತಂಡಗಳ ನಡುವೆ ಅಭ್ಯಾಸ ಪಂದ್ಯ ನಡೆಯುತ್ತಿರುವ ಈ ಸಂದರ್ಭದಲ್ಲಿ, BCCI ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಕ್ರಿಯಾಶೀಲರಾಗಿದ್ದು, ಅವರು ಕೂಡ ಅಭ್ಯಾಸದಲ್ಲಿ ಲಕ್ಷ್ಮಣ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಗೌತಮ್ ಗಂಭೀರ್ ಅವರು ಜೂನ್ 20ರೊಳಗೆ ತಂಡಕ್ಕೆ ಮರಳಲಾರರೆಂಬ ಸ್ಥಿತಿಯಲ್ಲಿ, ಟೆಸ್ಟ್ ಸರಣಿಯ ಆರಂಭದ ಪಂದ್ಯವನ್ನ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಮುಂದುವರೆಯುವ ಸಾಧ್ಯತೆ ಬಹಳವಾಗಿದೆ.