CHIKKANAYAKANAHALLI : ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಪಶು ವೈದ್ಯ ಜಸ್ಟ್ ಮಿಸ್ ಆಗಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು-ನಂದಿಹಳ್ಳಿ ಮಧ್ಯೆ ಇರುವ ಹಣೆಕಟ್ಟೆ ಕೆರೆಏರಿ ಮೇಲೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ವೈದ್ಯರಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಹಣೆಕಟ್ಟೆ ಕೆರೆಏರಿಯೂ ಚಿಕ್ಕದಾಗಿದ್ದು, ಇಲ್ಲಿ ಸಂಚರಿಸುವ ವಾಹನಗಳು ಸರಿಯಾಗಿ ಕಾಣದಿರುವುದೇ ಈ ಅಪಘಾತಕ್ಕೆ ಕಾಣವಾಗಿದೆ. ಜೊತೆಗೆ ಎರಡು ಬದಿಯಲ್ಲಿ ಬೆಳೆದಿರುವ ಗಿಡಗಳಿಂದಾಗಿ ಮುಂದೆ ಗಾಡಿ ಬರುತ್ತಿದೆ ಅನ್ನೋದೆ ಗೊತ್ತಾಗೊಲ್ಲ. ಜೊತೆಯಲ್ಲಿ ಕೆರೆ ಏರಿ ಆದರಿಂದ ಇಲ್ಲಿ ಟರ್ನಿಂಗ್ ಕೂಡ ಇದೇ. ವೇಗವಾಗಿ ಗಾಡಿಗಳು ಸಂಚಿರಿಸುವುದರಿಂದ ಅಪಘಾತವಾಗುತ್ತಿದೆ ಅಂತಾರೆ ಸಾರ್ವಜನಿಕರು.
ನಾವು ಹಲವು ಭಾರೀ ಈ ಕೆರೆ ಏರಿಯ ಅಗಲೀಕರಣ ಮತ್ತು ಅಕ್ಕಪಕ್ಕ ಬೆಳೆದಿರುವ ಜಂಗಲ್ ಕಟ್ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದ್ರೆ ಇದುವರೆವಿಗೂ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಇಲ್ಲಿ ಪ್ರತಿನಿತ್ಯ ನೂರಾರು ವಾಹನಗಳು, ಸವಾರರು ಸಂಚರಿಸುತ್ತಿರುತ್ತಾರೆ. ಯಾವಾಗ ಸಾವು-ನೋವು ಸಂಭವಿಸಬಹುದು ತಿಳಿಯುವುದಿಲ್ಲ. ವಾಹನ ಸವಾರರು ಜೀವಭಯದಲ್ಲಿಯೇ ನಿತ್ಯ ಸಂಚರಿಸುಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಮತ್ತೊಮ್ಮ ಸಾರ್ವಜನಿಕರು ಕಿಡಿಕಾರಿದರು.
ಇಂತಹ ಸಾವಿನ ದಾರಿಯಾಗಿರುವ ಕೆರೆ ಏರಿಯನ್ನು ಕೂಡಲೇ ಹಗಲಿಕರಣ ಮಾಡಬೇಕು. ಹಾಗೇಯೆ ರಸ್ತೆ ಎರಡು ಕಡೆಗಳಲ್ಲಿ ಬೆಳೆದಿರುವ ಗಿಡಮರಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಇನ್ನಷ್ಟು ಸಾವು ನೋವು ಸಂಭವಿಸುವ ಸಾದ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಅಲ್ಲಿ ಸಂಚರಿಸುವ ಗ್ರಾಮಸ್ಥರ ಪ್ರಾಣವನ್ನು ಉಳಿಸಬೇಕಿದೆ.