SIRA : ಪತ್ರಕರ್ತರು ಅಂದ್ರೆ ಬೆಲೆ ಇಲ್ವಾ ಪೊಲೀಸರ ವಿರುದ್ಧ ಆಕ್ರೋಶ

SIRA NEWS : ದಾವಣಗೆರೆಯಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಸಿಎಂ ಮತ್ತು ಡಿಸಿಎಂ ಇನ್ನೀತರರು ಶಿರಾ ಮಾರ್ಗವಾಗಿ ಚಲಿಸುತ್ತಿದ್ದು,. ಈ ವೇಳೆ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ಮಾರ್ಗಮಧ್ಯೆ ಭೇಟಿ ಮಾಡಲಿದ್ದು, ಕಾರ್ಯಕರ್ತರು ಮುಖಂಡರುಗಳು ಶಿರಾ ನಗರದ ಪಾಕ ಶಾಳೆಯ ಬಳಿ 6 ಗಂಟೆಗೆ ಬರುವಂತೆ ನಿನ್ನೆ ತಿಳಿಸಿತ್ತು. ಮಾಧ್ಯಮದವರಿಗೂ ಕೂಡ ಈ ಕುರಿತಾಗಿ ಆಹ್ವಾನವಿತ್ತು. ಈ  ಕಾರಣ ಮಾಧ್ಯಮದವರು ಸಹ ಅಲ್ಲಿ ಭೇಟಿ ಕೊಟ್ರು. ಆದ್ರೆ ಮಾಧ್ಯಮದವರನ್ನು ಆಚೆ ನಿಲ್ಲಿಸಿ ಅವರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ. ಈ ಕುರಿತಾಗಿ ಮಾಧ್ಯಮದವರು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದ ಹಾಲಿ ಮತ್ತು ಮಾಜಿ ನಗರಸಭಾ ಸದಸ್ಯರು, ಮಾಜಿ ತಾ.ಪಂ,ಜಿ.ಪಂ ಸದಸ್ಯರು,ಹಾಲಿ ಮತ್ತು ಮಾಜಿ ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಬ್ಲಾಕ್ ಕಾಂಗ್ರೆಸ್ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು,ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹೀಗೆ ಎಲ್ಲರನ್ನು ಪ್ರಕಟಣೆಯಲ್ಲಿ ಆಹ್ವಾನಿಸಿತ್ತು. ಅದರಂತೆ ಮಾಧ್ಯಮ ಮಿತ್ರರಿಗೂ ಕೂಡ ಆಹ್ವಾನ ನೀಡಲಾಗಿತ್ತು.  ಪಾಕ ಶಾಲೆಯ ಸ್ಥಳಕ್ಕೆ ಹೋದ ಮಾಧ್ಯಮದವರನ್ನು ಒಳಗೆ ಬಿಡದೆ ಹೊರಗೆ ನಿಲ್ಲಿಸಿದ್ರು, ಕೆಲಸ ಕಾಂಗ್ರೆಸ್‌ ಮುಖಂಡರನ್ನು ಪಾಕಶಾಲೆಯ ಒಳಗಡೆ ಬಿಟ್ಟು ಮಾಧ್ಯಮದವರನ್ನು ಕಡೆಗಣಿಸಿದ್ರು. ಅಂತ ಮಾಧ್ಯಮದವರು ಆಕ್ರೋಶ ಹೊರಹಾಕಿದ್ದಾರೆ.

ಈ ಕಾರಣಕ್ಕೆ ಬೇಸರಗೊಂಡ ಮಾಧ್ಯಮದವರನ್ನು ತಮ್ಮ ಕರೆದು ಅವಮಾನ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಪೊಲೀಸರು ಮತ್ತು ಮಾಧ್ಯಮದವರ ನಡುವೆ ಕೆಲಕಾಲ ವಾಗ್ದಾದ ನಡೆಯಿತು. ಮಾಧ್ಯಮದವರನ್ನು ಅವಮಾನಗೊಳಿಸಿದ ಪೊಲೀಸರ ವಿರುದ್ಧ ಶಿರಾ ಮಾಧ್ಯಮ ಕೆಂಡಾಮಂಡಲರಾಗಿದ್ದು, ಇತ್ತ ಶಿರಾ ಶಾಸಕ ಟಿ.ಬಿ.ಜಯಚಂದ್ರ ವಿರುದ್ಧ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

 

Author:

...
Keerthana J

Copy Editor

prajashakthi tv

share
No Reviews