RAICHURU NEWS : ಡಿಲು ಬಡಿದು ಬೆಂಕಿ ತಗುಲಿ JCB ವಾಹನ ಸಂಪೂರ್ಣ ಸುಟ್ಟು ಕರಗಲಾಗದ ಘಟನೆ ರಾಯಚೂರು ಜಿಲ್ಲೆಯ ಗಣಮೂರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ರೈತ ವಿರೇಶ ಅವರಿಗೆ ಸೇರಿದ ಸುಮಾರು ₹40 ಲಕ್ಷ ಮೌಲ್ಯದ JCB ವಾಹನವನ್ನು ಹೊಲದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆಯಲ್ಲಿ ಆಕಾಶದಿಂದ ಬಡಿದ ಸಿಡಿಲು ನೇರವಾಗಿ JCB ಗೆ ತಾಗಿ, ತಕ್ಷಣವೇ ವಾಹನದಲ್ಲಿ ಬೆಂಕಿ ಆವರಿಸಿಕೊಂಡಿದೆ.
ಇನ್ನು ಘಟನೆಯ ಬಗ್ಗೆ ಸ್ಥಳೀಯರಿಂದ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ. ಆದರೂ, JCB ಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.