TUMAKURU : ಹೇಮಾವತಿ ಕೆನಾಲ್ ವಿಸ್ತರಣೆ ವಿರೋಧಿಸಿ ನಡೆದ ಶಾಂತಿಪೂರ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರಲ್ಲಿ ನಾಲ್ವರಿಗೆ ಗುಬ್ಬಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಎಚ್.ಬಿ. ನವಚೇತನ್, ಬೆಣಚಿಕೆರೆ ಲೋಕೇಶ್, ಎಚ್.ಎನ್. ಚೇತನ್ ಹಾಗೂ ಬಿ.ವಿ. ಆನಂದ್ ಪರವಾಗಿ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಡ್ವೋಕೆಟ್ ಕೆಂಪರಾಜು ಉಚಿತವಾಗಿ ವಾದ ಮಂಡಿಸಿದ್ದು, ನ್ಯಾಯಾಲಯ ಅವರುಗಳನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.
ಮೇ 31ರಂದು ಗುಬ್ಬಿ ತಾಲೂಕಿನ ಸುಂಕಾಪುರದಲ್ಲಿ ಹೇಮಾವತಿ ಕೆನಾಲ್ ಯೋಜನೆ ವಿರುದ್ಧ ಶಾಂತಿಪೂರ್ಣ ಹೋರಾಟ ನಡೆದಿದೆ. ಈ ಹೋರಾಟದಲ್ಲಿ ಶಾಸಕರು, ಸ್ವಾಮೀಜಿಗಳು, ರೈತ ಮುಖಂಡರು ಹಾಗೂ ಹಲವಾರು ರೈತರು ಭಾಗವಹಿಸಿದ್ದರು. ಪೊಲೀಸರು 13 ಪ್ರತ್ಯೇಕ ಎಫ್ಐಆರ್ ದಾಖಲಿಸಿ, ಜೂನ್ 2 ರಂದು ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನಾಳೆ ಎಲ್ಲರೂ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.