TIPTUR : ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ| 30 ಕೋಟಿ ವೆಚ್ಚದ ಕಾಮಗಾರಿಗೆ ಸೋಮಣ್ಣ ಚಾಲನೆ

TIPTUR NEWS : ತಿಪಟೂರಿನಲ್ಲಿ 23-24 ಮೇಲ್ ಸೇತುವೆ ಹಾಗೂ ಕೆಲ ಸೇತುವೆಗಳು ಕೆಲಸ ಪ್ರಾರಂಭವಾಗಿದೆ.  ನ್ಯಾಷನಲ್ ಹೈವೇ ಪಕ್ಕದ ಹೊನ್ನವಳ್ಳಿ ಮಾರ್ಗದ ಮೇಲ್ ಸೇತುವೆ ಸುಮಾರು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ 30 ಕೋಟಿ ವೆಚ್ಚದಲ್ಲಿ ಹಲವು ಯೋಜನೆಗಳನ್ನು ಕೈಗೊಂಡಿದ್ದೇವೆ.  ‘ವಿವಿಧೆಡೆಗಳಲ್ಲಿ ಕೆಳಸೇತುವೆ, ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದ್ರು.

ತಿಪಟೂರುನಿಂದ ಹೊನ್ನವಳ್ಳಿ ಹೋಗುವ ರಸ್ತೆಯ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ವಿ.ಸೋಮಣ್ಣ ಗುದ್ದಲಿ ಪೂಜೆ ನೆರವೇರಿಸಿದ್ರು, ಈ ವೇಳೆ ಮಾಜಿ ಶಾಸಕ ಬಿ.ಸಿ.ನಾಗೇಶ್,  ಕೆ.ಟಿ.ಶಾಂತಕುಮಾರ್ ಸಾಥ್‌ ನೀಡಿದ್ರು.  ನಂತರ ಮಾತನಾಡಿದ ಅವರು, ಈಗ ಮೂರು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇನ್ನು ಮೂರು ಕಡೆ ಇದೆ ಅದನ್ನು ಸಹ ಮಾಡಲಿದ್ದೇವೆ. ಲೋಕಸಭಾ ವ್ಯಾಪ್ತಿ ಪಕ್ಕದಲ್ಲಿ ಇರುವಂತಹ ಶಿರಾ, ಪಾವಗಡ, ಕುಣಿಗಲ್ ಹಾಗೂ ಉಳಿದೆಡೆಗಳಲ್ಲಿ ಹಂತಹಂತವಾಗಿ ಕೆಲಸ ಆರಂಭಿಸಲಾಗುವುದು. ಇದರಿಂದ ಸಾರ್ವಜನಿಕರು ಸಂಚಾರ ದಟ್ಟಣೆಯಿಂದ ಸಮಸ್ಯೆ ಅನುಭವಿಸುವುದು ತಪ್ಪಲಿದೆ’ ಎಂದು ಹೇಳಿದರು.

ಇತ್ತ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದೇ ಒಂದು ರೈಲ್ವೆ ಗೇಟ್ ಇರುವುದಿಲ್ಲ. ರಾಜ್ಯದಲ್ಲಿ ಸುಮಾರು ₹33 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ  ತಿಪಟೂರು DSS ಸಂಚಾಲಕರಾದ ನಾಗತಿಹಳ್ಳಿ  ಕೃಷ್ಣಮೂರ್ತಿಯವರು ದಲಿತರ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಕೇಂದ್ರ ಸಚಿವ ವಿ. ಸೋಮನವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿ.ಸಿ.ನಾಗೇಶ್ ಮಾಜಿ ಶಿಕ್ಷಣ ಸಚಿವರು, ಕೆ.ಟಿ. ಶಾಂತ ಕುಮಾರ ಜೆಡಿಎಸ್ ಮುಖಂಡರು, ತಡಸೂರು ಗುರುರಾಜ್ ಜೆ ಡಿ ಎಸ್, ತಾಸಿಲ್ದಾರ್ ಪವನ್ ಕುಮಾರ್, ಹಾಗೂ ತಿಪಟೂರು ತಾಲೂಕಿನ ಅಧಿಕಾರಿಗಳು ಬಿಜೆಪಿ ಮತ್ತು ಜೆಡಿಎಸ್  ಮುಖಂಡರು ಕಾರ್ಯಕರ್ತರುಗಳು ರೈಲ್ವೆ ಅಧಿಕಾರ ಗಳು ವ್ಯವಸ್ಥಾಪಕರು  ಇತರರು ಹಾಜರಿದ್ರು.

Author:

...
Keerthana J

Copy Editor

prajashakthi tv

share
No Reviews