CHIKKABALLAPURA : ಕುಡಿದ ಮತ್ತಿನಲ್ಲಿ ವ್ಯಕ್ತಿಯ ಬರ್ಬರ ಕೊಲೆ | ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು

CHIKKABALLAPURA NEWS : ಒಂದು ಕಡೆ ಹೋಮ್‌ ಸ್ಟೇನಲ್ಲಿ ಭೀಕರ ಕೊಲೆಯಾಗಿರುವ ವ್ಯಕ್ತಿ.. ಇನ್ನೊಂದು ಕಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರೋ ಪೊಲೀಸರು..ಮತ್ತೊಂದೆಡೆ ಕೊಲೆ ಮಾಡಿ ಅಂದರ್‌ ಆಗಿರುವ  ಆರೋಪಿಗಳು.. ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಹ್ಯಾಪಿ ರೀಟ್ರೀಟ್ಸ್‌ ಎಂಬ ಹೋಮ್‌ ಸ್ಟೇ ನಲ್ಲಿ..

ಹೀಗೆ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವ ವ್ಯಕ್ತಿ ಅಸ್ಸಾಂ ಮೂಲದ ಮೂವತೈದು ವರ್ಷದ ಮೋಹನ್‌..ಹೊಟ್ಟೆಪಾಡಿಗಾಗಿ ತನ್ನ ಸ್ನೇಹಿತರ ಜೊತೆ ನಮ್ಮ ರಾಜ್ಯಕ್ಕೆ ವಲಸೆ ಬಂದಿದ್ದ. ಚಿಕ್ಕಬಳ್ಳಾಪುರ ನಗರದ ಹೊರವಲಯದ ಹ್ಯಾಪಿ ರಿಟ್ರೀಟ್ಸ್‌ ಎಂಬ ಹೋಮ್‌ ಸ್ಟೇನಲ್ಲಿ ತನ್ನ ಸ್ನೇಹಿತರಾದ ಹರಿದನ್‌, ತಿಪುರ, ದಾನ್‌ ಚೆಂದ್‌ ಎಂಬುವರ ಜೊತೆ ಮೂರು ತಿಂಗಳಿನಿಂದ ಹೌಸ್‌ ಕೀಪರ್‌ ಆಗಿ ಕೆಲಸ ಮಾಡ್ತಿದ್ದ. ಎಂದಿನಂತೆ ಕೆಲಸ ಮುಗಿದ ಬಳಿಕ ಹೋಮ್‌ ಸ್ಟೇಯ ಖಾಲಿ ಜಮೀನಿನಲ್ಲಿ ಸ್ನೇಹಿತರೆಲ್ಲರೂ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮೊಬೈಲ್‌ ಹಾಗು ಕುಡಿಯುವ ಸೀಕ್ರೆಟ್‌ ಮನೆಯವರಿಗೆ ತಿಳಿಸಿರುವ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು ಮೂವರು ಸೇರಿಕೊಂಡು ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಮರದ ರೀಪ್‌ ಗಳಿಂದ ಮೋಹನ್‌ ಹೊಡೆದು ಕೊಲೆ ಮಾಡಿದ್ದಾರೆ. ಇನ್ನು ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿಗಳು ಮೋಹನ್‌ ಮೃತದೇಹವನ್ನ ರೂಮ್‌ ನಲ್ಲೇ ಬಚಿಟ್ಟು ಬೇರೆ ಕಥೆ ಕಟ್ಟಲು ಪ್ಲ್ಯಾನ್‌ ಮಾಡಿದ್ರು. ಆದ್ರೆ ವಿಚಾರ ತಿಳಿದ ಪೊಲೀಸರು ಮೂವರು ಆರೋಪಿಗಳೊಂದಿಗೆ ಮೊತ್ತೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ನೇಹಿತನನ್ನೇ ಕೊಲೆಗೈದಿರೋ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.

ಇನ್ನೂ ಮೂರು ತಿಂಗಳಿನಿಂದ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದ ಐದು ಜನ ಸ್ನೇಹಿತರು ಸಿಲ್ಲಿ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು ಈ ಗಲಾಟೆ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಬೇಟಿ ಕೊಟ್ಟ ನಂದಿ ಗಿರಿಧಾಮ ಪೊಲೀಸರು ಮೂರು ಜನ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿರುವ ಶವಗಾರಕ್ಕೆ ರವಾನಿಸಲಾಗಿದೆ.

ಒಟ್ಟಾರೆ ಹೊಟ್ಟೆಪಾಡಿಗಾಗಿ ಅಸ್ಸಾಂನಿಂದ ಚಿಕ್ಕಬಳ್ಳಾಪುರಕ್ಕೆ ಬಂದು, ತಿಂಗಳಿಗೆ ಬಂದ ಅಷ್ಟೋ ಇಷ್ಟು ಹಣದಿಂದ ಕುಟುಂಬಸ್ಥರನ್ನು ಪೋಷಣೆ ಮಾಡುವುದು ಬಿಟ್ಟು, ಕೆಲಸ ಮುಗಿದ ಬಳಿ ಎಣ್ಣೆ ಪಾರ್ಟಿ ಮಾಡುವ ವೇಳೆ ಸಣ್ಣ ವಿಚಾರಕ್ಕೆ ನಡೆದ  ಗಲಾಟೆಯಲ್ಲಿ ಸ್ನೇಹಿತನನ್ನೇ ಮುಗಿಸಿ ಮೂರು ಜನ ಜೈಲು ಸೇರಿದ್ರೆ, ಇನ್ನೊಬ್ಬ ಖಾಕಿ ವಿಚಾರಣೆಯಲ್ಲಿದ್ದಾನೆ.

Author:

...
Keerthana J

Copy Editor

prajashakthi tv

share
No Reviews