ಗುಬ್ಬಿ : ಹನಿಟ್ರ್ಯಾಪ್ ಗ್ಯಾಂಗ್ ಖೆಡ್ಡಾಗೆ ಗುಬ್ಬಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ..!

ಗುಬ್ಬಿ :

ಉದ್ಯಮಿಗಳು, ಸರ್ಕಾರಿ ನೌಕರರು, ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಬಲೆ ಬೀಳಿಸಿಕೊಂಡು ಹಣ ಪೀಕುವುದೇ ಕೆಲವರ ಉದ್ಯೋಗವಾಗಿದೆ. ಇದೀಗ ತುಮಕೂರಿನಲ್ಲೂ ಸದ್ದಿಲ್ಲದೇ ಹನಿಟ್ರ್ಯಾಪ್‌ ಗ್ಯಾಂಗ್‌ನ ಕರಾಮತ್ತು ತಡವಾಗಿ ಬೆಳಕಿಗೆ ಬಂದಿದೆ. ಗುಬ್ಬಿ ಪಟ್ಟಣ ಪಂಚಾಯ್ತಿಯ ಮಾಜಿ ಅಧ್ಯಕ್ಷ ಜಿ.ಎನ್‌ ಅಣ್ಣಪ್ಪ ಸ್ವಾಮಿ ಹನಿ ಟ್ರ್ಯಾಪ್‌ ಬಲೆಗೆ ಬಿದ್ದಿದ್ದಾರೆ.

ಬಿಜೆಪಿ ಮುಖಂಡರು, ಗುಬ್ಬಿ ಪಟ್ಟಣ ಪಂಚಾಯ್ತಿಯ ಹಾಲಿ ಸದಸ್ಯರಾಗಿರೋ ಅಣ್ಣಪ್ಪ ಸ್ವಾಮಿಗೆ ಹನಿಟ್ರ್ಯಾಪ್‌ನ ಮೋಹದ ಬಲೆ ಬಿದ್ದು, ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಇದೀಗ ಮತ್ತೆ ಸುಂದರಿ ಗ್ಯಾಂಗ್‌ 20 ಲಕ್ಷಕ್ಕೆ ಡಿಮ್ಯಾಂಡ್‌ ಇಟ್ಟಿದ್ದು ಇದಕ್ಕೆ ಹೆದರಿ ಗುಬ್ಬಿ ಪೊಲೀಸರ ಮೊರೆ ಹೋಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಬಂದ ಸುಂದರಿಯ ರಿಕ್ವೇಸ್ಟ್‌ನನ್ನು ಅಣ್ಣಪ್ಪಸ್ವಾಮಿ ಅಕ್ಸೆಪ್ಟ್‌ ಮಾಡಿಕೊಂಡಿದ್ದಾರೆ. ಸ್ವಲ್ಪ ದಿನದ ಬಳಿಕ ಹಾಯ್‌, ಗುಡ್‌ಮಾರ್ನಿಂಗ್‌ ಮೇಸೆಜ್‌ನಿಂದ ಸಂಭಾಷಣೆ ಶುರುವಾಗಿದ್ದು, ಸುಂದರಿ ಹಾಗೂ ಅಣ್ಣಪ್ಪಸ್ವಾಮಿ ನಡುವೆ ಸಲುಗೆ ಮಿತಿ ಮೀರಿದೆ. ಅದೆಷ್ಟರಮಟ್ಟಿಗೆ ಅಂದರೆ ವಿಡಿಯೋ ಕಾಲಿಂಗ್‌ ಮಾಡುವ ಮಟ್ಟಕ್ಕೆ ತಲುಪಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸುಂದರಿ ಹಲವು ಕಡೆ ಬಲವಂತವಾಗಿ ಕರೆಸಿಕೊಂಡು ಮದುವೆ ಆಗುವಂತೆ ಒತ್ತಾಯಿಸಿದ್ದಳು ಎನ್ನಲಾಗಿದೆ.

ಸುಂದರಿ ಬಲೆಗೆ ಬಿದ್ದ ಅಣ್ಣಪ್ಪಸ್ವಾಮಿ ಆಕೆ ಹೇಳಿದ್ದನ್ನೆಲ್ಲಾ ಕೇಳ್ತಾ ಇದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಸುಂದರಿ ಆಗಾಗ್ಗೆ ಭೇಟಿ ಕೂಡ ಮಾಡ್ತ ಇದ್ದರು. ಸ್ವಲ್ಪ ದಿನದ ಬಳಿಕ ಅಣ್ಣಪ್ಪ ಸ್ವಾಮಿ ಸೈಲೆಂಟ್‌ ಆಗಿದ್ದರು. ಆಗ ಮೀಟ್‌ ಆಗಲಿಲ್ಲ ಅಂದರೆ ವಿಡಿಯೋ ವೈರಲ್‌ ಮಾಡುವುದಾಗಿ ಹೆದರಿಸಿ, ನಾನು ಕರೆದಾಗ ಬರಬೇಕು ಅಂತಾ ಹೆದರಿಸಿ ರೂಂ ಮಾಡಿ ಅವಳಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದಂತೆ. ಯಾವಾಗ ಮದುವೆ ಮಾಡಿಕೊಳ್ಳಲು ಅಣ್ಣಪ್ಪ ಸ್ವಾಮಿ ನಿರಾಕರಿಸಿದನೋ ಮಹಿಳೆ ಆಕೆಯ ಸ್ನೇಹಿತರೊಂದಿಗೆ ಸೇರಿ ಅವಳ ಜೊತೆಗಿನ ಫೋಟೋ, ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಮಾಡುವುದಾಗಿ ಬೆದರಿಸಿದ್ದಾಳೆ ಅಂತಾ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಗಂಭೀರ ಆರೋಪ ಮಾಡಿ ಗುಬ್ಬಿ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ಈ ಸಂಬಂಧ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹನಿಟ್ರ್ಯಾಪ್‌ ಗ್ಯಾಂಗ್‌ಗೆ ಬಲೆ ಬೀಸಿ ಕ್ಯಾತ್ಸಂದ್ರ ಮೂಲದ ನಿಶಾ, ಆಕೆಯ ಸ್ನೇಹಿತೆ ಜ್ಯೋತಿಯನ್ನು ವಶಕ್ಕೆ ಪಡೆದು ಸಾಂತ್ವಾನ ಕೇಂದ್ರದಲ್ಲಿ ಇರಿಸಿ ವಿಚಾರಣೆ ನಡೆಸಲಾಗ್ತಿದೆ.  ಜೊತೆಗೆ ಹನಿಟ್ರ್ಯಾಪ್‌ ಗ್ಯಾಂಗ್‌ನಲ್ಲಿದ್ದ ಗುಬ್ಬಿ ಪಟ್ಟಣದ ಭರತ್‌ ಹಾಗೂ ಬಿಲ್ಲೇಪಾಳ್ಯದ ಬಸವರಾಜು ಎಂಬುವವರಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಇನ್ನೊಂದು ಮುಖ್ಯ ವಿಚಾರ ಅಂದರೆ ಗುಬ್ಬಿ ಪಟ್ಟಣದಲ್ಲಿ ಕೊಲೆಯಾಗಿದ್ದ ಕುರಿಮೂರ್ತಿ ಕೇಸ್ ನಲ್ಲಿ ಬಸವರಾಜು ಹಾಗೂ ಭರತ್ ಆರೋಪಿಗಳಾಗಿದ್ದಾರೆ. ಅಲ್ಲದೇ ಅಣ್ಣಪ್ಪ ಸ್ವಾಮಿ ಕೂಡ ಗುಬ್ಬಿ ತಾಲೂಕಿನಲ್ಲಿ ನಡೆದ ಸಾವಿರಾರು ಎಕರೆ ಸರ್ಕಾರಿ ಜಮೀನು ಗೋಲ್ಮಾಲ್ ಕೇಸ್ ನಲ್ಲಿ ಎ2 ಆರೋಪಿ ಆಗಿದ್ದು, ಅಧ್ಯಕ್ಷನಾಗಿದ್ದ ವೇಳೆ ಅಣ್ಣಪ್ಪಸ್ವಾಮಿ 3 ತಿಂಗಳು ತಲೆಮರೆಸಿಕೊಂಡಿದರಂತೆ, ಅದೇನೆ ಇರಲಿ ನಿಜಕ್ಕೂ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಹನಿಟ್ರ್ಯಾಪ್‌ಗೆ ಒಳಗಾದರಾ ಅಥವಾ ಸುಂದರಿಯನ್ನು ಪ್ರೀತಿ ಮಾಡ್ತಾ ಇದ್ರಾ..? ಪ್ರೀತಿ ಹೆಸರಲ್ಲಿ ವಂಚನೆ ಮಾಡಲು ಅಣ್ಣಪ್ಪ ಸ್ವಾಮಿ ಮುಂದಾದರಾ ಇವೆಲ್ಲಾ ವಿಚಾರಗಳು ಪೊಲೀಸರ ತನಿಖೆಯಿಂದಲೇ ಬಯಲಾಗಬೇಕಿದೆ.

Author:

...
Editor

ManyaSoft Admin

Ads in Post
share
No Reviews