CHIKKABALLAPURA NEWS : ಚಿಕ್ಕಬಳ್ಳಾಪುರ ತಾಲೂಕಿನ ಯಲಗಲಹಳ್ಳಿ [yelagala halli] ಕ್ರಷರ್ ಝೋನ್ [crusher zone] ಬಳಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ರೈಟರ್ 40 ವರ್ಷದ ವೆಂಕಟೇಶ್ [venkatesh] ಎಂಬುವವರು ದುರ್ಮರಣ ಹೊಂದಿರುವ ದುಃಖದ ಘಟನೆ ಸಂಭವಿಸಿದೆ.
ಮೃತ ವೆಂಕಟೇಶ್, ಕಸುವುಗುಟ್ಟಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ವೆಂಕಟೇಶ್ವರ ಕ್ರಷರ್ನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನೆನ್ನೆ ಸಂಜೆ ಪೇಟೆಯಿಂದ ಮನೆಗೆ ಹಿಂತಿರುಗುವ ಸಂದರ್ಭದಲ್ಲಿಯೇ, ಎದುರಿನಿಂದ ಬಂದ ಟಿಪ್ಪರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ನಿಂದ ಕೆಳಗೆ ಬಿದ್ದು, ಟಿಪ್ಪರ್ ಚಕ್ರಕೆಡವಿದ ಪರಿಣಾಮವಾಗಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಸ್ಥಳೀಯರು ಹಾಗೂ ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಡಿಕ್ಕಿ ಹೊಡೆದ ಟಿಪ್ಪರ್ ಜೆಪಿ ಪ್ರಕಾಶ್ ಗೌಡ ಕ್ರಷರ್ಗೆ ಸೇರಿದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಘಟನೆ ಸಂಬಂಧ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.