
ಪೊಲೀಸರು ನೀರಾ ಇಳಿಸುತ್ತಿದ್ದ ರೈತನ ಬಂಧಿಸಿದ್ದಕ್ಕೆ ರೈತ ಮುಖಂಡರು ಪೊಲೀಸರ ಕಾರು ತಡೆದು ಪ್ರತಿಭಟನೆ ನಡೆಸಿದ್ದಾರೆ.ತುಮಕೂರು
ಚಿಕ್ಕನಾಯಕನಹಳ್ಳಿ:
ನೀರಾ ಇಳಿಸುತ್ತಿದ್ದ ರೈತನನ್ನು ಬಂಧಿಸಿದ್ದಕ್ಕೆ ರೈತ ಮುಖಂಡರು ಆಕ್ರೋಶ ಹೊರಹಾಕಿ, ಅಧಿಕಾರಿಗಳ ಕಾರು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ವ್ಯಾಪ್ತಿಯ ಕಂಪನಹಳ್ಳಿ ಬಳಿ ಈ ಘಟನೆ ನಡೆದಿದೆ.
ಕಂಪನಹಳ್ಳಿಯ ರೈತ ಈರಣ್ಣ ತಮ್ಮ ತೋಟದಲ್ಲಿ ಕಳೆದ 30 ವರ್ಷಗಳಿಂದ ನೀರಾವನ್ನು ಇಳಿಸಿ, ಮಾರಾಟ ಮಾಡುತ್ತಿದ್ದರು. ನೀರಾದಿಂದ ಬರುವ ಹಣದಿಂದಲೇ ರೈತ ಈರಣ್ಣ ಜೀವನ ನಡೆಸುತ್ತಿದ್ದಾರೆ. ಆದರೆ ಏಕಾಏಕಿ ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ಇಲ್ಲದೇ ನೀರಾ ಇಳಿಸುತ್ತಿದ್ದೀಯಾ ಎಂದು ಪ್ರಶ್ನಿಸಿ ಕೂಡಲೇ ಆ ರೈತನನ್ನು ಬಂಧಿಸಿ ಕರೆದೊಯ್ಯಲು ಮುಂದಾದರು.
ಇನ್ನು ರೈತ ಈರಣ್ಣನನ್ನು ಬಂಧಿಸಿದ್ದಾರೆ ಎಂದು ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ರೈತ ಮುಖಂಡರಾದ ಚಂದ್ರಣ್ಣ ಆಕ್ರೋಶ ಹೊರಹಾಕಿದ್ದಾರೆ. ರೈತ ಈರಣ್ಣನನ್ನು ಕರೆದೊಯ್ಯುತ್ತಿದ್ದ ಕಾರನ್ನು ತಡೆದು, ಕಾರಿಗೆ ಅಡ್ಡ ಬಂದು ಬಂಧಿಸಿರೋ ರೈತನನ್ನು ಬಿಡುವಂತೆ ಪಟ್ಟು ಹಿಡಿದರು. ಈ ವೇಳೆ ಅಬಕಾರಿ ಇನ್ಸ್ಪೆಕ್ಟರ್ ನವೀನ್ ಹಾಗೂ ರೈತ ಮುಖಂಡ ಚಂದ್ರಣ್ಣ ನಡುವೆ ಮಾತಿನ ಚಕಮಕಿ ಶುರುವಾಯಿತು. ಅದ್ಯಾಗ ರೈತರನ್ನು ಏಕಾಏಕಿ ಅರೆಸ್ಟ್ ಮಾಡ್ತೀರಾ, ಪೊಲೀಸ್ ಕಾರಿನಲ್ಲಿರೋ ರೈತ ಈರಣ್ಣನನ್ನು ಕಾರಿನಿಂದ ಇಳಿಸುವಂತೆ ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸರು ಹಾಗೂ ರೈತ ಮುಖಂಡ ನಡುವೆ ತಳ್ಳಾಟ-ನೂಕಾಟ ಉಂಟಾಯ್ತು. ಕೊನೆಗೆ ರೈತ ಈರಣ್ಣನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದ ರೈತನನ್ನು ಬಿಟ್ಟು ಅಧಿಕಾರಿಗಳು ಪಲಾಯನ ಮಾಡಿದರು.