Bangalore : ಕಣ್ಣೀರು ಹಾಕಿದ ಡಿಕೆಶಿಗೆ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ |ಡ್ರಾಮಾ ಎಂದ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ

BANGALORE: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರನ್ನು ನೆನೆದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದ ಘಟನೆ ಇದೀಗ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಡಿಕೆಶಿ ಕಣ್ಣೀರಿನ ಪ್ರತಿಕ್ರಿಯೆ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದು, “ಅದು ಕೇವಲ ಡ್ರಾಮಾ” ಎಂದು ಟೀಕಿಸಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ, “ನಾನು ಕಣ್ಣೀರು ಹಾಕಿದ್ದನ್ನು ಅಪಹಾಸ್ಯ ಮಾಡುವ ಪ್ರಯತ್ನ ನಡೆಯುತ್ತಿದೆ. ಕುಮಾರಸ್ವಾಮಿ ಅವರು ಯಾವಾಗಲಾದರೂ ಜನ ಮುಂದೆ ಕಣ್ಣೀರು ಹಾಕಿಲ್ಲವೇ? ಚುನಾವಣಾ ಸಮಯದಲ್ಲಿ ಯಾರು ಎಲ್ಲೆಲ್ಲಿ ಅತ್ತಿದ್ದಾರೆಂಬ ದಾಖಲೆ ನನ್ನಲ್ಲಿವೆ,” ಎಂದು ಪ್ರತಿರೋಧ ವ್ಯಕ್ತಪಡಿಸಿದರು.

ಡಿಕೆಶಿ ತಮ್ಮ ಅಭಿವ್ಯಕ್ತಿಯಲ್ಲಿ ತೀವ್ರ ಪ್ರಶ್ನೆ ಎತ್ತಿದ್ದು, "ಅತ್ತವರು ಅಬ್ಬರದಿಂದ ಅತ್ತಿದ್ದರು, ಅವರಿಗೆ ಬಿಜೆಪಿ ಸಾಂತ್ವನ ಕೊಟ್ಟಿದೆಯೇ? ನನಗೆ ಜನರ ನೋವು ನೋವಂತೆ ತೋರುತ್ತದೆ. ಹಾಗಾಗಿ ಕಣ್ಣೀರು ಬಂತು. ಅದು ಡ್ರಾಮಾ ಆಗಬಹುದೇ?" ಎಂದು ಪ್ರಶ್ನಿಸಿದ್ದಾರೆ.

ಕಾಲ್ತುಳಿತದ ಕುರಿತು ಮಾತನಾಡುತ್ತಾ ಅವರು, "ಈ ದುರಂತದಲ್ಲಿ ನನ್ನನ್ನು ದೋಷಿಯನ್ನಾಗಿ ಮಾಡುವುದು ಸರಿಯಲ್ಲ. ನಾನು ಯಾವ ರೀತಿ ಈ ಘಟನೆಯ ಹೊಣೆಗಾರ? ಎಲ್ಲವೂ ಸಮನ್ವಯದ ಕೊರತಿಯಿಂದ ಆಗಿದೆ. ತಪ್ಪು ಯಾರದು ಎಂಬುದನ್ನು ತನಿಖೆಯಿಂದ ಗೊತ್ತಾಗಬೇಕಿದೆ," ಎಂದು ಹೇಳಿದರು.

Author:

...
Sushmitha N

Copy Editor

prajashakthi tv

share
No Reviews