Bangalore : ಜುಲೈ 1 ರಿಂದ ಕಟ್ಟಡ ಮಂಜೂರಾತಿಗೆ ಇ-ಖಾತೆ ಕಡ್ಡಾಯ

BANGALORE: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಜುಲೈ 1ರಿಂದ ಕಟ್ಟಡ ಮಂಜೂರಾತಿಗೆ ಹೊಸ ನಿಯಮ ಜಾರಿಯಾಗಲಿದೆ. ಇದರಂತೆ, ಕಟ್ಟಡ ನಕ್ಷೆ ಅಥವಾ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಆಸ್ತಿ ಮಾಲೀಕರು ಇ-ಖಾತಾ ಹೊಂದಿರಬೇಕು ಎಂದು ಬಿಬಿಎಂಪಿ ಸೂಚಿಸಿದೆ.

ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, “ಇ-ಖಾತೆ ಇಲ್ಲದೆ ಯಾರೂ ಕಟ್ಟಡ ನಕ್ಷೆ ಅಥವಾ ಮಂಜೂರಾತಿಗೆ ಅರ್ಜಿ ನೀಡಬಾರದು. ಅಂತಹವರು ಮೊದಲು ಇ-ಖಾತೆ ಪಡೆಯಬೇಕು” ಎಂದು ಹೇಳಿದ್ದಾರೆ.

ಇ-ಖಾತಾ ಎಂದರೆ ಆಸ್ತಿ ವಿವರಗಳ ಡಿಜಿಟಲ್ ದಾಖಲೆ. ಈಗಾಗಲೇ ಅನೇಕ ಆಸ್ತಿ ಮಾಲೀಕರು ಈ ವ್ಯವಸ್ಥೆಗೆ ಸೇರಿಕೊಂಡಿದ್ದು, ಇನ್ನೂ ಈ ಸೇವೆಯನ್ನು ಬಳಸದೇ ಇರುವವರು ಸೂಕ್ತ ದಾಖಲೆಗಳೊಂದಿಗೆ ಇ-ಖಾತೆಗಾಗಿ ಅರ್ಜಿ ಸಲ್ಲಿಸಬೇಕು. ಡಿ.ಕೆ. ಶಿವಕುಮಾರ್ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ “ಇ-ಖಾತೆ ಇಲ್ಲದಿದ್ದರೆ ಮಂಜೂರಾತಿ ಸಿಗುವುದು ಅನುಮಾನಸ್ಪದ. ಈಗಲೇ ಪ್ರಕ್ರಿಯೆ ಪ್ರಾರಂಭಿಸಿ.” ಎಂದು ಬರೆದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದು ಸರ್ಕಾರದ ಡಿಜಿಟಲೀಕರಣದ ಭಾಗವಾಗಿದ್ದು, ಭ್ರಷ್ಟಾಚಾರ ತಡೆಯುವುದು, ದಾಖಲೆ ಪರಿಶುದ್ಧತೆ ಹೊಂದುವುದು ಹಾಗೂ ಭವಿಷ್ಯದ ಆಸ್ತಿ ಸಂಬಂಧಿತ ತೊಂದರೆಗಳನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಪಾಲಿಕೆಯ ಈ ಹೊಸ ನಿಯಮ ಜಾರಿಗೆ ಬಂದರೆ, ಎಲ್ಲಾ ಅರ್ಜಿ ಸಲ್ಲಿಕೆಗೆ ಇ-ಖಾತೆ ಕಡ್ಡಾಯವಾಗಲಿದೆ. ಆದ್ದರಿಂದ, ಈಗಲೇ ತಮಗೆ ಇ-ಖಾತೆ ಇದೆಯೇ ಎಂಬುದನ್ನು ಪರಿಶೀಲಿಸಿ, ಇಲ್ಲದಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಬೇಕೆಂದು ಸರ್ಕಾರದ ಕ್ರಮದಿಂದ ಸ್ಪಷ್ಟವಾಗುತ್ತದೆ.

Author:

...
Sushmitha N

Copy Editor

prajashakthi tv

share
No Reviews