CHIKKANAYAKANAHALLI : JDS ಮುಖಂಡನಿಂದ ಕೆರೆ ಏರಿ ಒತ್ತುವರಿ ಆರೋಪ

CHIKKANAYAKANAHALLI NEWS : ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ನಂದಿಹಳ್ಳಿ ಗ್ರಾಮದ ಕೆರೆ ಏರಿಯನ್ನು ಜೆಡಿಎಸ್‌ ಮುಖಂಡ ಬಿ, ದೇವರಾಜು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ,  ಹೌದು ಜೆಡಿಎಸ್‌ ಮುಖಂಡ, ತಿಮ್ಮಲಾಪುರ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರೋ ದೇವರಾಜು ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿಸ್ತಾ ಇದ್ದಾರೆ.

ಜೆಡಿಎಸ್‌ ಮುಖಂಡ ಸರ್ವೆ ನಂ. 139ರಲ್ಲಿರುವ 38 ಎಕರೆ 33 ಗುಂಟೆ ಪ್ರದೇಶದ ಕೆರೆ ಅಂಗಳವನ್ನು ತಮ್ಮದೇ ಜಾಗವೆಂದು ತಂತಿ ಕಂಬ ಹಾಕಿಸಿಕೊಂಡು ಸಾರ್ವಜನಿಕರ ಓಡಾಟ ಹಾಗೂ ರಸ್ತೆ ಕಾಮಗಾರಿಗೆ ಅಡ್ಡಿ ಸೃಷ್ಟಿಸುತ್ತಿದ್ದಾನಂತೆ ಹೀಗಾಗಿ ಗ್ರಾಮಸ್ಥರು ದೇವರಾಜು ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೆ ನಂದಿಹಳ್ಳಿಯಿಂದ ಕಲ್ಲಹಳ್ಳಿ ಮೂಲಕ ಬೆಂಗಳೂರಿನಿಂದ ಹೊಸದುರ್ಗ ಸಂಪರ್ಕ ಕಲ್ಪಿಸುವ ರಸ್ತೆಗೆ ಗುದ್ದಲಿ ಪೂಜೆ ನೇರವೇರಿಸಲಾಗಿದ್ದು, ರಸ್ತೆ ಕಾಮಗಾರಿ ಆರಂಭವಾಗಿದೆ. ಆದ್ರೆ ಈ ಜಾಗ ತಮ್ಮದೆಂದು ಕಾಮಗಾರಿ ಮುಂದುವರೆಸಲು ಜೆಡಿಎಸ್‌ ಮುಖಂಡ ದೇವರಾಜು ಅಡ್ಡಿಪಡಿಸ್ತಾ ಇದ್ದಾರೆ ಎಂದು ಗ್ರಾಮಸ್ಥರು ಆತನ ವಿರುದ್ಧ ತಿರುಗಿಬಿದ್ದಿದ್ದಾರೆ.  ಈ ಬಗ್ಗೆ ಪಿಡಿಒ ಗಮನಕ್ಕೂ ಕೂಡ ತರಲಾಗಿದ್ದು, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕ್ತಿದ್ದಾರೆ.

ಇನ್ನು ಬೇರೆ ಸಮಸ್ಯೆಯನ್ನು ಆಲಿಸಲೆಂದು ನಂದಿಹಳ್ಳಿ ಗ್ರಾಮಕ್ಕೆ ಪಿಡಿಒ ಸೇರಿ ಇತರೆ ಅಧಿಕಾರಿಗಳು ಬಂದಾಗ ಗ್ರಾಮಸ್ಥರು ಕೆರೆ ಒತ್ತುವರಿ ಬಗ್ಗೆ ಮಾಹಿತಿ ನೀಡಿದ್ರು. ಆಗ ಪಿಡಿಒ ಕೆರೆ ಏರಿ ಬಳಿ ಸರ್ವೇಗೆ ಮುಂದಾದಾಗ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜು,ನಂದಿ ಹಳ್ಳಿ ಗ್ರಾಮದ ಸದಸ್ಯೆ ಗೌರಮ್ಮ ಹಾಗೂ ಆಕೆಞಯ ಗಂಡ ಕೆಂಚಪ್ಪ, ಸೇರಿ ಕೆಲವರು ಗ್ರಾಮಸ್ಥರಿಗೆ ಜೀವ ಬೆದರಿಕೆ ಹಾಕಿ ಧಮ್ಕಿ ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಒಟ್ನಲ್ಲಿ ಅಧಿಕಾರ ಇದೆ ಎಂದು ಹೀಗೆ ಸಾರ್ವಜನಿಕ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕಿದೆ,

Author:

...
Keerthana J

Copy Editor

prajashakthi tv

share
No Reviews