CHIKKANAYAKANAHALLI NEWS : ಚಿಕ್ಕನಾಯಕನಹಳ್ಳಿ ತಾಲೂಕಿನ ಆಲದಕಟ್ಟೆ ಆಕ್ಸಿಡೆಂಟ್ ಸ್ಪಾರ್ಟ್ ಆಗಿದ್ದು, 24 ಗಂಟೆಯ ಅಂತರದಲ್ಲಿ ಎರಡು ಅಪಘಾತ ಸಂಭವಿಸಿದೆ. ಈ ಭಾಗದಲ್ಲಿ ಸಾಲು ಸಾಲು ಅಪಘಾತಗಳು ಆಗ್ತಾ ಇದ್ರು ಕೂಡ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯ್ತು.
ಇನ್ನು ನಿನ್ನೆ 24 ದಿನಗಳ ಅಂತರದಲ್ಲಿ ಆಲದಕಟ್ಟೆ ಬಳಿಯ ಒಂದೇ ಜಾಗದಲ್ಲಿ ಎರಡು ಅಪಘಾತಗಳು ಜರುಗಿವೆ, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಲ್ದೇ ಇದೇ ಜಾಗದಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 5ಕ್ಕೂ ಹೆಚ್ಚು ಅಪಘಾತಗಳಾಗಿರುವ ವರದಿ ಕೂಡ ಆಗಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ರು ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯವಹಿಸ್ತಿದ್ದಾರೆ. ಇನ್ನು ಅವೈಜ್ಞಾನಿಕ ಕಾಮಗಾರಿಯಿಂದಲೇ ಸರಣಿ ಅಪಘಾತಕ್ಕೆ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು. ಅಲ್ದೇ ರಸ್ತೆ ಸುಧಾರಣೆ, ಟೆಕ್ನಿಕಲ್ ಪರಿಶೀಲನೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವಂತೆ ಆಗ್ರಹಿಸಿದ್ರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಇಂಜಿಯರ್ ಬರುವವರೆಗೂ ರಸ್ತೆ ತಡೆಯುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ರು. ಅದ್ರೆ ನಾಳೆ ಬೆಳಗ್ಗೆ ಇಂಜಿನಿಯರ್ ಬರ್ತಾರೆ ಎಂದು ಅಧಿಕಾರಿಗಳು ಮನವೊಲಿಸಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟಿದ್ದಾರೆ.