Karnataka Farmers Protest : ಬೆಳಗಾವಿಯ ಗುರ್ಲಪುರದ ನಂತರ ಬಾಗಲಕೋಟೆಯಲ್ಲೂ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ಕಳೆದ ಮೂರು ದಿನಗಳಿಂದ ರೈತರು “ಕಬ್ಬಿಗೆ ₹3,500 ರೂ. ಬೆಂಬಲ ಬೆಲೆ ನೀಡಬೇಕು” ಎಂದು ಆಗ್ರಹಿಸುತ್ತಿದ್ದಾರೆ.

Karnataka Farmers Protest : ಬೆಳಗಾವಿಯ ಗುರ್ಲಪುರದ ನಂತರ ಬಾಗಲಕೋಟೆಯಲ್ಲೂ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ಕಳೆದ ಮೂರು ದಿನಗಳಿಂದ ರೈತರು “ಕಬ್ಬಿಗೆ ₹3,500 ರೂ. ಬೆಂಬಲ ಬೆಲೆ ನೀಡಬೇಕು” ಎಂದು ಆಗ್ರಹಿಸುತ್ತಿದ್ದಾರೆ. ಇಂದೂ ನೂರಾರು ರೈತರು ಮುಧೋಳ ಅಖಾಡದಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ₹3,300 ಘೋಷಣೆಯ ವಿರುದ್ಧ ರೈತರ ಪಟ್ಟು
ರಾಜ್ಯ ಸರ್ಕಾರ ಈಗಾಗಲೇ ಕಬ್ಬಿಗೆ ₹3,300 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ, ರೈತರು ಇದನ್ನು ತಳ್ಳಿಹಾಕಿದ್ದಾರೆ. “ನಮ್ಮ ಬೆಳೆ ಖರ್ಚು ಹೆಚ್ಚಾಗಿದೆ, ₹3,500 ರೂ. ಬೆಂಬಲ ಬೆಲೆ ಬೇಕೇ ಬೇಕು” ಎಂದು ರೈತರು ಒತ್ತಾಯಿಸುತ್ತಿದ್ದಾರೆ. ವಿಜಯಪುರ, ಕಲಬುರ್ಗಿ ನಂತರ ಈಗ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲೂ ಹೋರಾಟ ತೀವ್ರಗೊಂಡಿದೆ.
ಇದನ್ನೂ ಓದಿ : Chikkamagaluru | Murder News | ಆಸ್ತಿ ಆಸೆಗೆ ಮಗಳಿಂದಲೇ ತಾಯಿಯ ಬಲಿ.!
ಮುಧೋಳದಲ್ಲಿ ರಸ್ತೆ ತಡೆ – ರೈತರ ಬಣದ ಬಿರುಸು
ಕಸಬಾ ಜಂಬಗಿ ಕ್ರಾಸ್ ಬಳಿ ರೈತರು ಹೆದ್ದಾರಿ ತಡೆದು, ರಸ್ತೆ ಮಧ್ಯೆ ಅಡುಗೆ ಮಾಡಿ ಧರಣಿ ನಡೆಸಿದರು. “ಸರ್ಕಾರ ಸ್ಪಂದಿಸುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ” ಎಂದು ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರ ಮನವಿಗೂ ರೈತರು ಪಟ್ಟು ಬಿಡದೆ ಪ್ರತಿಭಟನೆ ಮುಂದುವರೆಸಿದರು.
ಬೀದರ್ನಲ್ಲಿ ಧಿಕ್ಕಾರ ಕೂಗಿದ ರೈತರು
ಬೀದರ್ನಲ್ಲಿಯೂ ಕಬ್ಬು ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೈಯಲ್ಲಿ ಕಬ್ಬು ಹಿಡಿದು ಸರ್ಕಾರಕ್ಕೆ ಧಿಕ್ಕಾರ ಕೂಗಿದರು. “ಸಿದ್ದರಾಮಯ್ಯ ಮತ್ತು ಶಿವಾನಂದ್ ಪಾಟೀಲ್ ಅವರು ನಮ್ಮ ಮಾತು ಕೇಳದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ” ಎಂದು ಎಚ್ಚರಿಸಿದರು. ಪೊಲೀಸರು ಶ್ರದ್ಧಾಂಜಲಿ ಬ್ಯಾನರ್ ತೆಗೆದುಹಾಕುವಂತೆ ಸೂಚಿಸಿದರೂ ರೈತರು ಹಿಂಜರಿಯಲಿಲ್ಲ.
ಕಬ್ಬು ಹೋರಾಟದ ಕಿಚ್ಚು ರಾಜ್ಯದಾದ್ಯಂತ ವ್ಯಾಪಣೆ
ಬೆಳಗಾವಿಯಿಂದ ಬಾಗಲಕೋಟೆ, ವಿಜಯಪುರದಿಂದ ಬೀದರ್ವರೆಗೆ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ಆರದೆ ಮುಂದುವರೆದಿದೆ. ರೈತರು ಸರ್ಕಾರ ಸ್ಪಂದಿಸುವವರೆಗೂ ಹೋರಾಟ ತೀವ್ರಗೊಳಿಸಲು ಸಿದ್ಧರಾಗಿದ್ದಾರೆ.
MUST WATCH: CHIKKABALLAPUA | ದೇವಸ್ಥಾನಕ್ಕೆ ಹೋಗಿದ್ದವರ ಮೇಲೆ ಹೆಜ್ಜೇನು ದಾಳಿ




