ಟಿಸಿಎಸ್ 10ಕೆ ಮ್ಯಾರಥಾನ್ ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ – ಇಂತಹ ಕಾರ್ಯಕ್ರಮಗಳಿಂದ ಬೆಂಗಳೂರಿಗೆ ಅನುಕೂಲ ಎಂದ DCM

ಸಾವಿರಾರು ಓಟಗಾರರು ಭಾಗವಹಿಸಿದ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ಗೆ ಇಂದು ಭರ್ಜರಿ ಚಾಲನೆ ಸಿಕ್ಕಿದೆ. ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಚಾಲನೆ ನೀಡಿದರು.

ಟಿಸಿಎಸ್ 10ಕೆ ಮ್ಯಾರಥಾನ್ಗೆ ಡಿಸಿಎಂ ಚಾಲನೆ
ನಂತರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಇಂದು ಬೆಳಗಿನ ಜಾವ 3.00 ಗಂಟೆಗೆ ದೆಹಲಿಯಿಂದ ವಾಪಸ್ ಬಂದು, ಟಿಸಿಎಸ್ ನ 10ಕೆ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದೆ. ಮೊದಲೇ ಒಪ್ಪಿಕೊಂಡಿದ್ದರಿಂದ ನಾನು ಹಾಗೂ ರಾಜ್ಯಪಾಲರು ಭಾಗಿಯಾಗಿದ್ದೇವೆ” ಎಂದು ತಿಳಿಸಿದರು.

ಈ ಬಾರಿ ಟ್ರ್ಯಾಕ್ ಅತ್ಯುತ್ತಮವಾಗಿತ್ತು
ಸುಮಾರು 32 ಸಾವಿರಕ್ಕೂ ಹೆಚ್ಚು ಜನರು ಈ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದು, ಅದರಲ್ಲಿ 26 ಶೇಕಡಾಮಹಿಳೆಯರು ಭಾಗಿಯಾಗಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ವಿದೇಶಗಳಿಂದಲೂ ಓಟಗಾರರು ಆಗಮಿಸಿದ್ದು, ಕಾರ್ಯಕ್ರಮದ ವೈಶಿಷ್ಟ್ಯ ಹೆಚ್ಚಿಸಿದೆ. ಇನ್ನು ಈ ಬಾರಿ ಟ್ರ್ಯಾಕ್ ಅತ್ಯುತ್ತಮವಾಗಿತ್ತು ಎಂಬ ಅಭಿಪ್ರಾಯ ಓಟಗಾರರಿಂದ ವ್ಯಕ್ತವಾಗಿದೆ.
READ THIS : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಜೋಡಿ ಶಿವು – ಮಾನಸಾ

ಗಣ್ಯರು, ರಾಜಕೀಯಮುಖಂಡರು,ಕ್ರೀಡಾಪಟುಗಳು ಭಾಗಿ
ಇಂತಹ ಕ್ರೀಡಾ ಹಾಗೂ ಪ್ರವಾಸೋದ್ಯಮ ಕಾರ್ಯಕ್ರಮಗಳು ಬೆಂಗಳೂರಿನ ಅಭಿವೃದ್ಧಿಗೆ ಸಹಕಾರಿ ಆಗುತ್ತವೆ ಎಂದು ಡಿಸಿಎಂ ತಿಳಿಸಿದ್ದಾರೆ.
ಟಿಸಿಎಸ್ ಸಂಸ್ಥೆಯ ಆಯೋಜನೆಗೆ ಅವರು ಅಭಿನಂದನೆಸಲ್ಲಿಸಿದರು. ಈ ವೇಳೆ ಹಲವು ಗಣ್ಯರು, ರಾಜಕೀಯ ಮುಖಂಡರು ಹಾಗೂ ಕ್ರೀಡಾಪಟುಗಳು ಭಾಗಿಯಾಗಿದ್ದರು.

ಅವರು ಹೊಗಳುತ್ತಾರೆ ಅಂತ ಭಾವಿಸಿದರೆ ನಾವು ಮೂರ್ಖರು”
2 ವಾರಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಅವರು ಬೆಂಗಳೂರು ಮೂಲಸೌಕರ್ಯ ಬಗ್ಗೆ ಟೀಕೆ ಮಾಡಿದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆ ಕೇಳಿದಾಗ, “ಅವರು ಇರುವುದೇ ಟೀಕೆ ಮಾಡುವುದಕ್ಕೆ. ಅವರ ಕೈಯಿಂದ ಇನ್ನೇನು ಮಾಡಲು ಆಗುವುದಿಲ್ಲ. ಟೀಕೆ ಮಾಡದೇ ಅವರೇನು ಹೊಗಳುತ್ತಾರಾ? ಅವರು ಹೊಗಳುತ್ತಾರೆ ಅಂತ ಭಾವಿಸಿದರೆ ನಾವು ಮೂರ್ಖರು” ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
MUST WTCH : SSLCಯಲ್ಲಿ ನಮ್ದು LASTನಲ್ಲಿದೆ – SURESH GOWDA ಕಾಲೆಳೆದ MLA RANGANATH




