ಗುಬ್ಬಿ ತಾಲೂಕಿನಲ್ಲಿ ತಾಯಿ- ಮಗಳ Suicide ಕೇಸ್ ಗೆ ಟ್ವಿಸ್ಟ್ – ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು.

ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದ ತಾಯಿ- ಮಗಳ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡ್ತಾ ಇದ್ದಾರೆ.
ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ
ಕಳೆದ 9 ವರ್ಷಗಳ ಹಿಂದೆ ತಿಪಟೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಗಂಗಾಮಣಿಯನ್ನು, ಹಾಗಲವಾಡಿ ಗ್ರಾಮದ ಯತೀಶ್ ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ವೇಳೆ ವರದಕ್ಷಿಣೆಯನ್ನು ಕೂಡ ಕೊಟ್ಟು ಮದುವೆ ಮಾಡಲಾಗಿದ್ದು, ಈ ಮುದ್ದಾದ ಸಂಸಾರಕ್ಕೆ ಮುದ್ದಾದ ಮೂರು ಮಕ್ಕಳು ಕೂಡ ಇದ್ದರು. ಆದ್ರೆ ಮದುವೆಯೇ ನಾಗಮಣಿ ಬಾಳಿಗೆ ಹುರುಳಾಗಿತ್ತು. ಮದುವೆ ಅದ ಕೆಲ ತಿಂಗಳುಗಳಿಂದಲೂ ಗಂಡ ಹಾಗೂ ಆತನ ಮನೆಯವರಿಂದ ವರದಕ್ಷಿಣೆ ಕಿರುಕುಳ ಇತ್ತಂತೆ.

READ THIS : ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ – ಕತ್ತು ಸೀಳಿ ಬರ್ಬರವಾಗಿ Murder
ಕುಟುಂಬಸ್ಥರ ಆರೋಪ ಏನು?
ಇನ್ನು ಹಲವು ಬಾರಿ ಮೃತ ನಾಗಮಣಿಗೆ ವರದಕ್ಷಿಣೆ ಕಿರುಕುಳ ಕೊಡ್ತಾನೆ ಇದ್ರು ಕೂಡ ಎಲ್ಲವನ್ನು ಸಹಿಸಿಕೊಂಡು ಬಂದಿದ್ದಳಂತೆ. ಆದ್ರೆ ಸಾಯುವ ಮುನ್ನ ಜಾತ್ರೆಗೆ ಹೋಗುವ ವಿಚಾರಕ್ಕೆ ಗಂಡ ಯತೀಶ್ ಹಾಗೂ ಹೆಂಡ್ತಿ ನಾಗಮಣಿ ಮಧ್ಯೆ ಗಲಾಟೆಯಾಗಿದ್ದು, ವರದಕ್ಷಿಣೆ ತರುವ ಹಾಗೆ ಇದ್ರೆ ಮಾತ್ರ ಹೋಗಲು ಗಂಡ ಹೇಳಿದ್ನಂತೆ. ಇದೇ ವಿಚಾರಕ್ಕೆ ಗಲಾಟೆಯಾಗಿ ಗಂಡ ಯತೀಶ್ ಹೆಂಡ್ತಿ ನಾಗಮಣಿಗೆ ಹೊಡೆದು ಸಾಯಿಸಿದ್ದಾನೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ರು.
ವರದಕ್ಷಿಣೆಗಾಗಿಯೇ ಕೊಲೆ ಮಾಡಿದ್ದಾರೆ
ಅಲ್ದೇ ಮೃತ ನಾಗಮಣಿಗೆ ಯಾವುದೇ ಋತುಚಕ್ರದ ಹೊಟ್ಟೆನೋವು ಇರಲಿಲ್ಲ. ಈ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ರು. ಜೊತೆಗೆ ನಾವು ಮನೆಗೆ ಹೋದಾಗ ಹೆಂಡ್ತಿ ಮಗುವಿಗೆ ಕಾಟ ಕೊಡ್ತಾ ಇದಿದ್ದನ್ನ ನೋಡಿದ್ದೇವೆ. ವರದಕ್ಷಿಣೆಗಾಗಿಯೇ ಕೊಲೆ ಮಾಡಿದ್ದಾರೆ ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ರು.

ಇದು ಪ್ರೀ ಪ್ಲಾನ್ ಆಗಿ ಮಾಡಿರುವ ಕೊಲೆ
ಇನ್ನು ನಾಗಮಣಿ ಹಾಗೂ ಮಗುವಿನ ಸಾವಿನ ಬಗ್ಗೆ ಅಹಿಂದ ಸಮುದಾಯದ ಅಧ್ಯಕ್ಷರಾದ ಲಿಂಗರಾಜು ಅನುಮಾನ ವ್ಯಕ್ತಪಡಿಸಿದ್ದು, ಒಂದೇ ಕುಣಿಕೆಯಲ್ಲಿ ಇಬ್ಬರು ಸಾಯಲು ಸಾಧ್ಯವೆ. ಇದು ಪ್ರೀ ಪ್ಲಾನ್ ಆಗಿ ಮಾಡಿರುವ ಕೊಲೆಯಾಗಿದೆ. ನಮಗೆ ಮೃತರ ಸಂಬಂಧಿಕರು ದೂರನ್ನು ನೀಡಿದ್ದಾರೆ. ಗಂಡ- ಹೆಂಡ್ತಿ ಗಲಾಟೆ ವೇಳೆ ಎರಡು ವರ್ಷದ ಮಗು ಸ್ಥಳದಲ್ಲೇ ಇದ್ದು, ಮಗು ಕಿರುಚಾಡಲು ಶುರು ಮಾಡಿದೆ. ಮಗು ಸತ್ಯ ಹೇಳುತ್ತೆ ಅನ್ನೋ ಭಯಕ್ಕೆ ಮಗುವನ್ನು ಕೂಡ ಕೊಲೆ ಮಾಡಿ ನೇಣಿಗೆ ಹಾಕಿದ್ದಾರೆ. ತಾಯಿ- ಮಗುವಿನ ಸಾವಿಗೆ ನ್ಯಾಯ ಸಿಗುವವರೆಗೂ ಅಹಿಂದ ಸಮುದಾಯದಿಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.
ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ತಬ್ಬಲಿ
ಒಟ್ನಲ್ಲಿ ವರದಕ್ಷಿಣೆಯ ದಾಹಕ್ಕೆ ಅಮಾಯಕ ಹೆಂಡ್ತಿ ಹಾಗೂ ಬದುಕಿ ಬಾಳಬೇಕಿದ್ದ ಕಂದಮ್ಮ ಸಾವಿನ ಮನೆ ಸೇರಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಸೂಕ್ತ ತನಿಖೆಯಿಂದಷ್ಟೇ ಸಾವಿನ ಸತ್ಯ ಹೊರಬರಬೇಕಿದೆ. ಇತ್ತ ಹೆತ್ತ ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದು ಮಾತ್ರ ದುರಂತವೇ ಸರಿ.
MUST WATCH : ಐನಾತಿ ಕಳ್ಳರಿಗೆ ದೇವರೆಂದ್ರೆ ಭಯವೇ ಇಲ್ಲ ದೇಗುಲಕ್ಕೆ ನುಗ್ಗಿ ಕಳ್ಳತನ ಎಸಗಿ ಎಸ್ಕೇಪ್




