ತುಮಕೂರು : ಸಣ್ಣ ಕೈಗಾರಿಕಾ ಉದ್ಯಮಿಯಿಂದ 1.15 ಲಕ್ಷಕ್ಕೆ ಬೇಡಿಕೆ – ತುಮಕೂರಿನ ಇಬ್ಬರು ಅಧಿಕಾರಿಗಳ ಮೇಲೆ ದಾಳಿ.

ಮಹತ್ವದ ಕಾರ್ಯಚರಣೆ ನಡೆಸಿ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದ್ದು, ಲೋಕಾ ದಾಳಿಗೆ ಅಧಿಕಾರಿಗಳಿಬ್ಬರು ದಂಗಾಗಿದ್ದಾರೆ. ಮಹತ್ವದ ಕಾರ್ಯಚರಣೆ ನಡೆಸಿ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಹಾಯಕನನ್ನು ಲೋಕಾ ಬಲೆಗೆ ಬೀಳಿಸಿದ್ದಾರೆ.
ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಹಾಗೂ ಆತನ ಸಹಾಯಕ ಎನ್. ಎಸ್.ಪ್ರಸಾದ್ ಎಂಬುವರೇ ಲೋಕಾಯುಕ್ತ ಬಲೆಗೆ ಸಿಕ್ಕಿದ ಆರೋಪಿಗಳು.
1.15 ಲಕ್ಷಕ್ಕೆ ಬೇಡಿಕೆ
ಗುರುವಾರ ಮಧ್ಯಾಹ್ನ 1.15ರ ಸಮಯದಲ್ಲಿ ಕಚೇರಿ ಆವರಣದಲ್ಲಿ ಸಹಾಯಕ ಪ್ರಸಾದ್ ಸಣ್ಣ ಕೈಗಾರಿಕಾ ಉದ್ಯಮಿಯಿಂದ 1.15 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಟ್ಯಾಪ್ ಮಾಡಿದ್ದಾರೆ.
ಇದರ ಜಂಟಿ ನಿರ್ದೇಶಕ ಲಿಂಗರಾಜ್ ಸೇರಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನು ಓದಿ : ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ

ತುಮಕೂರಿನ ಇಬ್ಬರು ಅಧಿಕಾರಿಗಳ ಮೇಲೆ ದಾಳಿ
ಲೋಕಾಯುಕ್ತ ಎಸ್.ಪಿ.ಲಕ್ಷ್ಮಿನಾರಾಯಣ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಕೆ.ಎಂ.ಸಂತೋಷ್ ಹಾಗೂ ಎಂ.ಮಂಜುನಾಥ ಕೆ.ಸುರೇಶ, ಬಿ.ಮೊಹಮ್ಮದ್ ಸಲೀಂ ನೇತೃತ್ವದ ತಂಡ ಟ್ರ್ಯಾಪ್ ಕಾರ್ಯಾಚರಣೆ ನಡೆಸಿತ್ತು.
ನಗರದ ವಿಜಯನಗರ ಬಡಾವಣೆಯ ವಾಸಿ ಎಂ.ಎಸ್.ಚನ್ನಬಸವೇಶ್ವರ ಅವರು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಶಿವಲಿಂಗ ಇಂಡಸ್ಟ್ರೀಸ್ ಸ್ಥಾಪಿಸಿದ್ದು, ಮೊದಲ ಸಲ ಸಣ್ಣ ಉದ್ಯಮ ಪ್ರಾರಂಭಿಸಿದವರಿಗೆ ರಾಜ್ಯ ಸರ್ಕಾರ ನೀಡುವ ಸಹಾಯ ಧನವನ್ನು ಮಂಜೂರು ಮಾಡಿಕೊಡುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು.
ಅವರಿಗೆ ಒಟ್ಟು 18.75 ಲಕ್ಷ ಸಹಾಯ ಧನ ಮಂಜೂರಾಗಬೇಕಿತ್ತು, ಈ ಸಹಾಯಧನವನ್ನು ದುಂಜೂರು ಮಾಡಲು ಡಿಐಸಿ ಜಂಟಿ ನಿರ್ದೇಶಕರು 1.25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಕಂತಾಗಿ ಹತ್ತು ಸಾವಿರ ರೂಪಾಯಿ ಪಡೆದಿದ್ದರು ಎನ್ನಲಾಗಿದೆ.
ಡಿ.ಕೆ.ಲಿಂಗರಾಜು ಮತ್ತು ಸಹಾಯಕ ಪ್ರಸಾದ್ ಬಂಧನ
ಆದರೆ ಲಂಚಕೊಡಲು ಇಷ್ಟವಿಲ್ಲದ ಚನ್ನಬಸವೇಶ್ವರ ಅವರು ಡಿ.11 ಗುರುವಾರ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಡಿವೈಎಸ್ಪಿ ಡಾ.ಸಂತೋಷ್ ಕೆ.ಎಂ. ಅವರು ಪ್ರಕರಣ ದಾಖಲಿಸಿ ಟ್ರ್ಯಾಕ್ ಕಾರ್ಯಾಚರಣೆ ನಡೆಸಿದರು ಅಧಿಕಾರಿ ಮತ್ತು ಸಹಾಯಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ನೋಡಿ : ಯತೀಂದ್ರ ಸಿದ್ದರಾಮಯ್ಯಗೆ ಮಿನಿಮಮ್ ಕಾಮನ್ಸೆನ್ಸ್ ಕೂಡ ಇಲ್ಲ: ಶಾಸಕ ಬಾಲಕೃಷ್ಣ ಕಿಡಿ




