DIRECTOR SURESH BABU : ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರಾಗಿರುವ ಸೂರಪ್ಪ ಬಾಬು ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣದ ಎಫ್ಐಆರ್ ದಾಖಲಾಗಿದೆ.
‘ಕೋಟಿಗೊಬ್ಬ 2, 3’ ಹಾಗೂ ‘ಪೃಥ್ವಿ’ ಹಿಟ್ ಸಿನಿಮಾಗಳ ನಿರ್ಮಾಪಕ ಎಂಬ ಹೆಸರನ್ನು ಹೊಂದಿರುವ ಬಾಬು ಅವರ ವಿರುದ್ಧ, ಮಹಿಳೆ ಯೊಬ್ಬರು ಆರ್ಥಿಕ ವಂಚನೆ ಹಾಗೂ ಬೆದರಿಕೆ ಆರೋಪ ಮಾಡಿದ್ದಾರೆ.
2023ರಲ್ಲಿ ಪರಿಚಯವಾದ ಸೂರಪ್ಪ ಬಾಬು, “ಶಿವರಾಜ್ ಕುಮಾರ್ ಮತ್ತು ಗಣೇಶ್ ಅವರ ಜೊತೆ ಸಿನಿಮಾ ಮಾಡುತ್ತಿದ್ದೇನೆ” ಎಂದು ಹೇಳಿದ್ದರು. ಚಿತ್ರದ ನಿರ್ಮಾಣಕ್ಕಾಗಿ ಹಣ ಬೇಕೆಂದು ಕೇಳಿದ ಅವರು, ಹಂತಹಂತವಾಗಿ ಮಹಿಳೆಯಿಂದ ₹92 ಲಕ್ಷ ರೂಪಾಯಿ ಪಡೆದು ಕೊಂಡರು. ಕೆಲ ಸಮಯದ ನಂತರ ಸಂಪರ್ಕ ಕಡಿತಗೊಂಡಿದ್ದು, ಸೂಕ್ತ ಉತ್ತರ ನೀಡದೇ ಮಹಿಳೆಯನ್ನು ನಿರಾಶೆಗೊಳಿಸಿದ್ದಾರೆ. ವಿಚಾರಣೆ ಮಾಡಿದಾಗ ಶಿವರಾಜ್ ಕುಮಾರ್ ಜೊತೆ ಸಿನಿಮಾ ಇಲ್ಲ ಎಂಬುದು ಗೊತ್ತಾದ ಹಿನ್ನೆಲೆ, ಹಣದ ಬೇಡಿಕೆಯ ಮೇಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದರಲ್ಲಿ ಕೇವಲ ₹25 ಲಕ್ಷ ರೂ. ಮಾತ್ರ ಹಿಂದಿರುಗಿಸಲಾಗಿದೆ, ಉಳಿದ ಹಣಕ್ಕಾಗಿ ನ್ಯಾಯಕ್ಕೆ ಮೊರೆ ಹೋಗಲಾಗಿದೆ.
ಇನ್ನು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲುಗೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರ ವಿರುದ್ಧ ಹೀಗೊಂದು ಆರೋಪ ಕೇಳಿಬಂದಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.