BANGALORE : ಕಲ್ಯಾಣಮಂಟಪದ ಏರ್ ಕೂಲರ್‌ನಿಂದ ಎಲೆಕ್ಟ್ರಿಕ್ ಶಾಕ್ | 4 ವರ್ಷದ ಮಗು ದುರ್ಮರಣ

BANGALORE NEWS : ಬೆಂಗಳೂರು ನಗರದಲ್ಲಿ ಅಸಾಧಾರಣ ದುರ್ಘಟನೆ ಒಂದು ನಡೆದಿದ್ದು, ನಾಲ್ಕು ವರ್ಷದ ಮಗು ಏರ್ ಕೂಲರ್‌ನಿಂದ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದೆ. ಈ ಹೃದಯವಿದ್ರಾವಕ ಘಟನೆ ಬಸವೇಶ್ವರನಗರದ ಕಲ್ಯಾಣ ಮಂಟಪವೊಂದರಲ್ಲಿ ಇಂದು ಸಂಭವಿಸಿದೆ. ಮೃತ ಮಗುವನ್ನು ಎಂ. ಶಿವಂ (4) ಎಂದು ಗುರುತಿಸಲಾಗಿದೆ. ಶಿವಂ, ಕೆಂಪೆಗೌಡನಗರ ನಿವಾಸಿಗಳಾದ ಪ್ರದೀಪ್ ಹಾಗೂ ದೀಪಾ ದಂಪತಿಯ ಪುತ್ರನಾಗಿದ್ದನು.

ಈ ದುರ್ಘಟನೆ ವೆಸ್ಟ್ ಆಫ್ ಕಾರ್ಡ್ ರೋಡ್‌ನ ಅಭಿಮಾನಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಮದುವೆ ರಿಸೆಪ್ಷನ್ ವೇಳೆ ನಡೆದಿದೆ. ಸಂಬಂಧಿಕರ ಮದುವೆಗೆ ಕುಟುಂಬದೊಂದಿಗೆ ಬಂದಿದ್ದ ಶಿವಂ, ಮಂಟಪದೊಳಗೆ ಇದ್ದ ಏರ್ ಕೂಲರ್ ಸಮೀಪ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಗು ನೆಲಕ್ಕೆ ಬಿದ್ದಿರುವುದನ್ನು ಕಂಡ ತಾಯಿ ದೀಪಾ ಆತನ ಹತ್ತಿರ ಧಾವಿಸಿದ್ದಾಳೆ. ತಾಯಿ ಹತ್ತಿರ ಹೋದಾಗ ತಾಯಿಗೂ ಕರೆಂಟ್ ಶಾಕ್ ಹೊಡೆದಿದೆ ಎಂದು ತಿಳಿದು ಬಂದಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ವೈದ್ಯರು ಮಗು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಘಟನೆ ಸಂಬಂಧಿತವಾಗಿ ಮಂಟಪದ ಮಾಲೀಕ ದಿವಾಕರ್, ಮ್ಯಾನೇಜರ್ ಸಂತೋಷ್, ಮತ್ತು ಎಲೆಕ್ಟ್ರಿಷಿಯನ್ ಸತೀಶ್ ವಿರುದ್ಧ ಪೊಲೀಸರಿಗೆ ದೂರು ದಾಖಲಾಗಿದ್ದು, ವಿದ್ಯುತ್ ಅಸುರಕ್ಷತೆ ಮತ್ತು ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ತನಿಖೆ ಪ್ರಾರಂಭವಾಗಿದೆ.

 

Author:

...
Keerthana J

Copy Editor

prajashakthi tv

share
No Reviews