TUMAKURU NEWS : ನಮ್ಮ ತುಮಕೂರು ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗ್ತಿದೆ. ಆದ್ರೆ ನಗರದ ಸೌಂದರ್ಯವನ್ನು ಕಸದ ಸಮಸ್ಯೆ ಹಾಳುಮಾಡುತ್ತಿದೆ. ತುಮಕೂರಿನ ಸದಾಶಿವನಗರದಲ್ಲಿ ಕಸದ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ.
ಸದಾಶಿವನಗರದಒಂದನೇ ಮುಖ್ಯರಸ್ತೆಯ ಆರು ಮತ್ತು ಏಳನೇ ಅಡ್ಡರಸ್ತೆಯಲ್ಲಿ ರಾಶಿ ರಾಶಿ ಕಸ ಬಿದ್ದಿರುವುದರಿಂದ ಸಾರ್ವಜನಿಕರು ಓಡಾಡಲು ಕಷ್ಟ ಪಡುವಂತಾಗಿದೆ. ಒಂದನೇ ಮುಖ್ಯರಸ್ತೆಯ 6ನೇ ಅಡ್ಡರಸ್ತೆಗೆ ಅಳವಡಿಸಿರುವ ಬೋರ್ಡ್ನ ಕೆಳಗೆ ಬಿದ್ದಿದ್ದು, ಬೋರ್ಡ್ನ ಮೇಲೂ ಜನರು ಕಸವನ್ನು ಸುರಿದುಹೋಗ್ತಿದ್ದು ಸುತ್ತಮುತ್ತಲು ಗಬ್ಬು ನಾರುವಂತಾಗಿದೆ. ಇನ್ನು ಕಸದ ಸಮಸ್ಯೆಯಿಂದಾಗಿ ನಾಯಿ, ಹಂದಿಗಳ ಕಾಟವೂ ಹೆಚ್ಚಾಗಿದೆ. ಇದ್ರಿಂದ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ.
ಇನ್ನು ಒಂದು ಕಡೆ ಕಸದ ಸಮಸ್ಯೆಯಿಂದ ಸಾಕಷ್ಟು ತೊಂದ್ರೆ ಆಗ್ತಿದೆ ಎಂದು ಜನರಿಗೆ ಗೊತ್ತಿದ್ರು ಕೂಡ ಜನರು ಕಸವನ್ನು ರಸ್ತೆ ಬದಿಯಲ್ಲಿ ಕಸ ಸುರಿದು ಹೋಗ್ತಿದ್ದಾರೆ, ಮನೆ ಮುಂದೆ ಕಸದ ಗಾಡಿಗಳು ಬಂದ್ರು ಕೂಡ ಜನರು ಕಸದ ಗಾಡಿಗೆ ಕಸವನ್ನು ಹಾಕದೇ ರಸ್ತೆ ಬದಿಯೇ ಹಾಕ್ತಿದ್ದಾರೆ. ಇತ್ತ ರಾಶಿ ರಾಶಿ ಕಸ ಬಿದಿದ್ರು ಪಾಲಿಕೆ ಅಧಿಕಾರಿಗಳು ಕಸವನ್ನು ಎತ್ತುವ ಕೆಲಸ ಮಾಡ್ತಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.
ಅದೇನೇ ಆಗಲಿ ರಾಶಿ ರಾಶಿ ಕಸ ಬಿದ್ದು , ಆ ಕಸದಿಂದ ನಾಯಿಗಳ ಕಾಟ ಹಾಗೂ ಹಂದಿಗಳ ಕಾಟ ಹೆಚ್ಚಾದ್ರೂ ಕೂಡ. ಪಾಲಿಕೆ ಸಿಬ್ಬಂದಿಗಳು ಕಸವನ್ನು ಎತ್ತದಿರೋದು ಮಾತ್ರ ದುರಂತವೇ ಸರಿ. ಕಸದ ಸಮಸ್ಯೆ ಬಗ್ಗೆ ಪ್ರಜಾಶಕ್ತಿ ಟಿವಿ ವರದಿ ಮಾಡ್ತಾ ಇದ್ದು ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.