ಬೆಂಗಳೂರು : ಮಳೆ ನೀರು ಸಿಡಿದಿದ್ದಕ್ಕೆ ಹೀಗಾ ಮಾಡೋದು? | ಬೆರಳನ್ನೇ ಕಚ್ಚಿ ವಿಕೃತಿ ಮೆರೆದ ಭೂಪ..!

ಬೆಂಗಳೂರು : ರಾಜ್ಯದಲ್ಲಿ ಬಿಟ್ಟುಬಿಡದೇ ಮಳೆ ಆಗ್ತಿದೆ, ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲೋದು ಕಾಮನ್‌. ಆದ್ರೆ ರಸ್ತೆಯಲ್ಲಿ ನಿಲ್ಲುವ ನೀರಿನಿಂದಾಗಿ ನಾನಾ ಅವಾಂತರಗಳನ್ನು ಸೃಷ್ಟಿಮಾಡ್ತಿದೆ. ಇತ್ತ ರಸ್ತೆ ಮೇಲೆ ನಿಂತ ನೀರ ಮೇಲೆ ವಾಹನಗಳು ಚಾಲನೆ ಮಾಡುವಾಗ, ಮಳೆ ನೀರು ಅಕ್ಕ ಪಕ್ಕದಲ್ಲಿ ಓಡಾಡುವ ವಾಹನಗಳಿಗೆ ಹಾಗೂ ಓಡಾಡುವ ಜನರಿಗೆ ಸಿಡಿಯವುದು ಕಾಮನ್‌. ಆದ್ರೆ ಇಲ್ಲೊಬ್ಬ ವ್ಯಕ್ತಿ ಕಾರಿಗೆ ಮಳೆ ನೀರು ಹಾರಿದೆ ಎಂಬ ಕಾರಣಕ್ಕೆ ಚಾಲಕನ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಪೈಶಾಚಿಕ ಕೃತ್ಯ ಬೆಂಗಳೂರಿನ ಲುಲುಮಾಲ್‌ ಅಂಡರ್‌ಪಾಸ್‌ ಬಳಿ ನಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಒಂದೇ ಒಂದು ಸಣ್ಣ ಮಳೆ ಬಂದ್ರು ಸಾಕು, ರಸ್ತೆಗಳು ಕೆರೆಯಂತಾಗುತ್ತವೆ. ಕೆಲವೊಮ್ಮೆ ಎದೆ ಎತ್ತರಕ್ಕೆ ನೀರು ನಿಲ್ಲುತ್ತದೆ.. ರಸ್ತೆಯಲ್ಲಿ ನೀರು ನಿಂತು ಪಕ್ಕದಲ್ಲಿರೋರಿಗೆ ಸಿಡಿಯುತ್ತೆ… ಅದ್ರಂತೆ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಲುಲು ಅಂಡರ್‌ ಪಾಸ್‌ ಬಳಿ ರಸ್ತೆಯಲ್ಲಿ ನೀರು ನಿಂತಿದೆ. ನಿನ್ನೆ ಮೆಜೆಸ್ಟಿಕ್‌ನಿಂದ ಲುಲು ಮಾಲ್‌ ಕಡೆಗೆ ಕಾರಿನಲ್ಲಿ ಜಯಂತ್‌ ದಂಪತಿ ತೆರಳುತ್ತಿದ್ದರು. ಈ ವೇಳೆ ಓಕುಳಿಪುರಂ ಅಂಡರ್ ಪಾಸ್ ನಲ್ಲಿ ಪಕ್ಕದ ಸಾಗುತ್ತಿದ್ದ ಕಾರಿಗೆ ಮಳೆ ನೀರು ಸಿಡಿದಿದೆ. ಇದಕ್ಕೆ ರೊಚ್ಚಿಗೆದ್ದ ಪಕ್ಕದ ಕಾರು ಚಾಲಕ ಕಾರನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ., ತಪ್ಪಾಗಿದೆ ಎಂದು ಜಯಂತ್‌ ಕ್ಷಮೆ ಕೇಳಿದ್ದಾನೆ.. ಆದ್ರು ಕೂಡ ಬಿಡದೇ ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರನ್ನು ಅಡ್ಡಗಟ್ಟಿದ್ದಾನೆ. ಕಾರಿನಿಂದ ಜಯಂತ್‌ನನ್ನು ಎಳೆದು, ಮುಖಕ್ಕೆ ಗುದ್ದಿ ರೌಡಿಸಂ ರೀತಿ ವರ್ತಿಸಿದ್ದಾನೆ. ಅಷ್ಟಲ್ಲದೇ ಜಯಂತ್‌ ನ ಬಲಗೈನ ಉಂಗುರ ಬೆರಳನ್ನು ಮಾಂಸ ಬರುವಂತೆ ಕಚ್ಚಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ.

ಇನ್ನು  ಬಲಗೈ ಬೆರಳಿಗೆ ಆದ ಗಾಯದಿಂದ ನರಳಾಡಿದ ಜಯಂತ್‌, ಕೂಡಲೇ ಆಸ್ಪತ್ರೆಗೆ ದೌಡಾಯಿಸಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಜಯಂತ್‌ ಬೆರಳಿಗೆ 5 ಸ್ವಿಚ್‌ ಹಾಕಿದ್ದು, 6 ತಿಂಗಳು ರೆಸ್ಟ್‌ ಮಾಡುವಂತೆ ಡಾಕ್ಟರ್‌ ಸೂಚನೆ ನೀಡಿದ್ದಾರೆ. ಸಾಲದಕ್ಕೆ ತನ್ನದಲ್ಲದ ತಪ್ಪಿಗೆ ಆಸ್ಪತ್ರೆಯ ಬಿಲ್‌ 2 ಲಕ್ಷ ಹಣವನ್ನು ಜಯಂತ್‌ ಕಟ್ಟಿದ್ದಾರೆ.

ಸರ್ಜರಿ ಮಾಡಿಸಿಕೊಂಡ ಬಳಿಕ ಜಯಂತ್‌ ಕಾರು ಚಾಲಕನ ವಿರುದ್ಧ ಮಾಗಡಿ ರೋಡ್‌ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ, ಕಾರು ಚಾಲಕ ಹಾಗೂ ಮಹಿಳೆ ವಿರುದ್ಧ ಪೊಲೀಸರು FIR ದಾಖಲಿಸಿದ್ದು, ಕಾರ್‌ ನಂಬರ್‌ ಮೂಲಕ ಆರೋಪಿಗಳ ಹುಡುಕಾಟ ನಡೆಸಲಾಗ್ತಿದೆ. ಅದೇನೆ ಇರಲಿ ರಸ್ತೆ ಅಂದ ಮೇಲೆ ನೂರಾರು ಮಂದಿ ಓಡಾಡುತ್ತಾರೆ. ಅಚಾನಕ್ಕಾಗಿ ಕೆಲ ಘಟನೆಗಳು ನಡೆಯುತ್ತವೆ, ಆಗಂತಾ ಈ ರೀತಿಯ ವಿಕೃತಿಗಳನ್ನು ಮೆರೆಯೋದು ಎಷ್ಟು ಸರಿ.

Author:

...
Keerthana J

Copy Editor

prajashakthi tv

share
No Reviews