KALABURAGI NEWS : ಬೆಂಗಳೂರು CHINNASWAMY STADIUM ದಲ್ಲಿ ಸಂಭವಿಸಿದ ಕಾಲ್ತುಳಿತ [STAMPEDE] ಘಟನೆಯ ಹಿನ್ನೆಲೆಯಲ್ಲಿ ರಾಜಕೀಯ ಜಟಾಪಟಿಯಲ್ಲಿ ನವ ತಿರುವು ಬಂದಿದೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ [PRIYANK KHARGE] ಮಾಧ್ಯಮದ ಮುಂದೆ ತೀವ್ರ ವಾಗ್ದಾಳಿ ನಡೆಸಿದ್ದು, ಘಟನೆಯನ್ನು ಸರ್ಕಾರದ ತಪ್ಪೆಂದು ಬಿಂಬಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧದಲ್ಲಿ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಇಲ್ಲಿ ನಡೆದ ಕಾಲ್ತುಳಿತಕ್ಕೆ ನಾವು ರಾಜೀನಾಮೆ ನೀಡೋಣ. ಆದರೆ ಪಹಲ್ಗಾಂ ದಾಳಿಗೆ, ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಯಾರಾದರೂ ರಾಜೀನಾಮೆ ಕೊಟ್ಟಿದೆಯೆ? ಎಲ್ಲರಿಗೂ ಒಂದೇ ಮಾನದಂಡ ಇರಬೇಕು. ಅದು ಮೋದಿ ಸರ್ಕಾರಕ್ಕೂ, ಯೋಗಿ ಸರ್ಕಾರಕ್ಕೂ ಅನ್ವಯಿಸಬೇಕು” ಎಂದು ಹೇಳಿದ್ದಾರೆ.
“ಪಹಲ್ಗಾಂನಲ್ಲಿ ಉಗ್ರರು 26 ಜನರನ್ನು ಕೊಂದರು, ಅವರ ಬಗ್ಗೆ ಏನಾದರೂ ಕೇಳಿದ್ರಾ? ಅಮಿತ್ ಶಾ ರಾಜೀನಾಮೆ ನೀಡಿದರಾ? ಕುಂಭಮೇಳದಲ್ಲಿ ಜನರು ಸಾವನ್ನಪ್ಪಿದಾಗ ಯೋಗಿ ಆದಿತ್ಯನಾಥ್ ಏನು ತಕ್ಷಣದ ಕ್ರಮ ಕೈಗೊಂಡರು? ಅಲ್ಲಿ ಜನರ ತಪ್ಪು, ಇಲ್ಲಿ ಸರ್ಕಾರದ ತಪ್ಪು ಎನ್ನೋದು ಎಷ್ಟು ನ್ಯಾಯ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ರಾಜ್ಯ ಸರ್ಕಾರ ವಿಧಾನಸೌದದ ಮೇಲೆ ಫ್ಯಾಮಿಲಿ ಪೋಟೊಶೂಟ್ ಮಾಡಿಸಿದೆ ಎಂದು ವಿಪಕ್ಷಗಳು ಪ್ರಶ್ನಿಸುತ್ತಿರುವುದರ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ “ಬಿಜಿಪಿ ಅವರು ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಇವರು ರಣಹದ್ದುಗಳಿದ್ದಂತೆ. ಹೀಗಾಗಿ ಇದೀಗ ಸಾವಿನ ಮೇಲೆ ಮತ್ತೆ ರಾಜಕಾರಣ ಮಾಡುತ್ತಿದ್ದಾರೆ. ವಿಧಾನಸೌಧದ ಮುಂದೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡಿದ್ದು ಆಟೋಗ್ರಾಫ್, ಪೋಟೋಗ್ರಾಫ್ಗಲ್ಲ, ನಮಗಿಂದ ಪೋಟೊಗ್ರಾಫ್ ಹುಚ್ಚು ಮೋದಿಗೆ ಇದೆ ಎಂದು ಹೇಳಿದರು.