ಬೆಳಗಾವಿ: ಬೆಳಗಾವಿಯಲ್ಲಿ ವರುಣಾರ್ಭಟ | ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ ನೀರು

ಬೆಳಗಾವಿ: 

ಕರ್ನಾಟಕದ ಹಲವೆಡೆ ಗುರುವಾರ ಭಾರೀ ಮಳೆ ಆಗಿದೆ. ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯ ಹಲವೆಡೆ ಧಾರಾಕಾರ ಮಳೆ ಆಗಿದ್ದು, ಶ್ರಿ ಯಲ್ಲಮ್ಮ ದೇವಿ ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಬೆಳಗಾವಿ ಜಿಲ್ಲೆಯ ಹಲವೆಡೆ ಗುರುವಾರ ಮಳೆಯಾಗಿದ್ದು, ಸಂಜೆ ಸುರಿದ‌ ಭಾರಿ ಮಳೆಗೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ನೀರು ನುಗ್ಗಿ ಭಕ್ತರು ಪರದಾಡುವಂತಾಯಿತು. ಇಂದು ಭಕ್ತರು ಎಂದಿನಂತೆ ದೇವಿ ದರ್ಶನ ಪಡೆಯುತ್ತಿದ್ದಾರೆ.

ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಸುರಿದ ರಭಸದ ಮಳೆಯಿಂದಾಗಿ ದೇವಸ್ಥಾನದ ಪಾವಳಿಯಲ್ಲಿ ನೀರು ಧುಮುಕಿದ್ದು, ಭಕ್ತರಿಗೆ ದೇವಿಯ ದರ್ಶನ ಪಡೆದುಕೊಳ್ಳಲು ಹೆಚ್ಚಿನ ಅಸ್ತವ್ಯಸ್ತವಾಯಿತು. ಭಾರಿ ಮಳೆ ಸುರಿದು ಹಳ್ಳ-ಕೊಳ್ಳ ಉಕ್ಕಿ ಹರಿದ ಪರಿಣಾಮ, ಸವದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿಬಂದಿದೆ.

 

 

 

Author:

share
No Reviews