TUMAKURU : ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಪಾಲಿಕೆ ಹಣವನ್ನು ಲೂಟಿ ಹೊಡಿತ್ತಾ ಇದ್ಯಾ ಎಂಬ ಅನುಮಾನ ಮೂಡಿದೆ. ಕಳಪೆ ಕಾಮಗಾರಿ ಮಾಡಿ ಪಾಲಿಕೆ ಹಣ ಪೋಲು ಮಾಡುತ್ತಿದೆ, ಕಳಪೆ ಕಾಮಗಾರಿಯಿಂದ ಜನರಿಗೆ ತೊಂದರೆ ಆಗ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 23ನೇ ವಾರ್ಡ್ ಬೆಳಗುಂಬ ಮುಖ್ಯರಸ್ತೆಯ ಭಗೀರಥ ನಗರದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಭಾರೀ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಚರಂಡಿ ಕಾಮಗಾರಿಯನ್ನು ನಡೆಸಲಾಗ್ತಿದೆ. ಆದರೆ ಕಾಮಗಾರಿಗೆ ಕಳಪೆ ಗುಣಮಟ್ಟದ ಸಿಮೇಂಟ್, ಕಬ್ಬಿಣ, ಎಂ-ಸ್ಯಾಂಡ್ ಬಳಸಲಾಗ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡ್ತಿದ್ದಾರೆ. ಅಲ್ಲದೇ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಬಳಸಲಾಗುತ್ತಿದ್ದು ಕಾಮಗಾರಿ ಎಷ್ಟು ಗುಣಮಟ್ಟವಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದರು.
ಇನ್ನು ಚರಂಡಿ ಕಾಮಗಾರಿ ಮಾಡುವ ಸ್ಥಳದಲ್ಲಿ ಗುತ್ತಿಗೆದಾರರಾಗಲಿ ಅಥವಾ ಪಾಲಿಕೆ ಇಂಜಿನಿಯರ್ಗಳು ಕಾಣಿಸುವುದೇ ಇಲ್ಲ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲು ಯಾವ ಕಡೆ ಇಳಿಜಾರು ಮಾಡಬೇಕು. ಆದರೆ ಇವರು ಹೈಟ್ ಮಾಡಿದ್ದಷ್ಟು ಚರಂಡಿಯಲ್ಲಿ ನೀರು ಹರಿಯಲ್ಲ ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು. ಅಲ್ಲದೇ ಈ ಕೆಲಸವೆಲ್ಲಾ ಕೇವಲ ತೋರಿಸಲು ಮಾತ್ರ. ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದರು. ಇಲ್ಲವಾದಲ್ಲಿ ಅಧಿಕಾರಿಗಳ ಮೇಲಿನ ವಿಶ್ವಾಸ ಕಡಿಮೆ ಆಗುವುದಂತೂ ಸತ್ಯವಾಗಲಿದೆ.