TUMAKURU : ತುಮಕೂರು ಅಂದಾಕ್ಷಣ ನಾವು ಶೈಕ್ಷಣಿಕ ನಗರ, ಸ್ಮಾರ್ಟ್ಸಿಟಿ, ಸ್ವಚ್ಛನಗರ ಅಂತಾ ಕರಿತೀವಿ. ಆದರೆ ಜನಪ್ರತಿನಿಧಿ -ಗಳ ನಿರ್ಲಕ್ಷ್ಯವೋ. ಸ್ಮಾರ್ಟ್ಸಿಟಿ ಅಧಿಕಾರಿಗಳ ನಿರ್ಲಕ್ಷ್ಯವೋ. ಇಲ್ಲ ಪಾಲಿಕೆ ಅಧಿಕಾರಿಗಳು ಅತಿಯಾದ ಬೇಜವಾಬ್ದಾರಿತನವೋ ಗೊತ್ತಿಲ್ಲ. ದಿನೇ ದಿನೇ ನಗರದಾದ್ಯಂತ ಕಸದ ರಾಶಿ ಹೆಚ್ಚಾಗ್ತಿದೆ. ಈ ಸಮಸ್ಯೆ ಬಗ್ಗೆ ಎಷ್ಟೇ ಬಾರಿ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ, ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಅದ್ಯಾಕೋ ಆಲಸ್ಯ ತೋರುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಇದೀಗ ಸದಾಶಿವನಗರದಲ್ಲಿ ಕಸದ ರಾಶಿ ರಾಶಿ ಬೀಳುತ್ತಿದೆ. ಹಂದಿ-ನಾಯಿಗಳು ಕಸದ ಜಾಗವನ್ನೇ ತಮ್ಮ ಅವಾಸಸ್ಥಾನವಾಗಿ ಮಾಡಿಕೊಂಡಿವೆ. ಈ ಕಾರಣಕ್ಕೆ ಅಲ್ಲಿ ಸಾರ್ವಜನಿಕರು, ಮಕ್ಕಳು ಜೀವ ಭಯದಲ್ಲಿಯೇ ಓಡಾಡುತ್ತಿದ್ದಾರೆ.
ನಿನ್ನೆ ತಾನೇ ನಿಮ್ಮ ಪ್ರಜಾಶಕ್ತಿ ಟಿವಿ ಸದಾಶಿವನಗರದಲ್ಲಿರುವ ಸ್ವಾಮಿ ವಿವೇಕಾನಂದ ಪಾರ್ಕ್ ಬಗ್ಗೆ ವರದಿ ಬಿತ್ತರಿಸಿತ್ತು. ಪಾಳುಕೊಂಪೆ ಯಾಗಿರುವ ವಾರ್ಡ್ನ ದುಸ್ಥಿತಿಯ ಬಗ್ಗೆ ಸುದ್ದಿ ಮಾಡಿತ್ತು. ಇದೀಗ ಅದೇ ಸದಾಶಿವನಗರದ ಬಹುತೇಕ ಕಡೆಗಳಲ್ಲಿ ಕಸದ ಸಮಸ್ಯೆ ಇದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಹಂದಿ ನಾಯಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.
ಇತ್ತ ಸದಾಶಿವನಗರ ಪೊಲೀಸ್ ಠಾಣೆಯ ಮುಂಭಾಗವೇ ಕಸದ ರಾಶಿ ರಾಶಿ ಬಿದ್ದಿದ್ದರು ಇತ್ತ ಯಾರು ಕೂಡ ತಲೆಹಾಕಿ ನೋಡ್ತಿಲ್ಲ. ಪೊಲೀಸರು ಕೂಡ ಆ ಸಮಸ್ಯೆಯ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕಸ ಎಸೆದಿರೋದರಿಂದ ನಾಯಿಗಳು ಹಾಗೂ ಹಂದಿಗಳ ಕಾಟ ಹೆಚ್ಚಾಗಿದೆ. ಮಕ್ಕಳು ರಸ್ತೆಗೆ ಬಂದರೆ ನಾಯಿಗಳಿಂದ ತೊಂದರೆ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಕಂಡರೂ ಸಹಾ ಪಾಲಿಕೆಯ ಅಧಿಕಾರಿಗಳು ಸ್ವಚ್ಛ ಮಾಡಲು ಮುಂದಾಗುತ್ತಿಲ್ಲವಂತೆ. ಹೀಗಾಗಿ ನಾವು ದಿನನಿತ್ಯ ಓಡಾಡೋದಕ್ಕೆ ತುಂಬಾ ತೊಂದರೆ ಆಗ್ತಿದೆ ಅಂತಾ ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದೇನೇ ಇರಲಿ ಇಷ್ಟೆಲ್ಲ ರಾಶಿ ರಾಶಿ ಕಸ ಬಿದ್ದು , ಆ ಕಸದಿಂದ ನಾಯಿಗಳ ಕಾಟ ಹಾಗೂ ಹಂದಿಗಳ ಕಾಟ ಹೆಚ್ಚಾದ್ರೂ ಕೂಡ. ಪಾಲಿಕೆ ಸಿಬ್ಬಂದಿಗಳು ಈ ಜಾಗವನ್ನು ಸ್ವಚ್ಛತೆ ಮಾಡ್ತಿಲ್ಲ. ಅಧಿಕಾರಿಗಳೇ ನಿಮಗೆ ಯಾಕೆ ಇಷ್ಟೋಂದು ನಿರ್ಲಕ್ಷ್ಯ. ಬೇಜವಾಬ್ದಾರಿತನ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸದಾಶಿವನಗರ 7 ನೇ ಮುಖ್ಯರಸ್ತೆಯನ್ನು ಸ್ವಚ್ಛಗೊಳಿಸ್ತಾರಾ ಕಾದು ನೋಡಬೇಕಿದೆ.