TUMAKURU : ತುಮಕೂರು ಜಿಲ್ಲಾಸ್ಪತ್ರೆಯ ಕರ್ಮಕಾಂಡ ಯಾಕೋ ಕಡಿಮೆ ಆಗ್ತಿಲ್ಲ. ಸರಿಯಾದ ಸಮಯಕ್ಕೆ ರೋಗಿಗಳಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ನಿಮ್ಮ ಪ್ರಜಾಶಕ್ತಿ ಟಿವಿ ಜಿಲ್ಲಾಸ್ಪತ್ರೆಯ ಸಮಸ್ಯೆ ಕುರಿತು ಸಾಲು ಸಾಲು ವರದಿ ಮಾಡುತ್ತಿದೆ. ಆದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಪ್ರತಿನಿತ್ಯ ಲಕ್ಷಾಂತರ ಜನರು ಜಿಲ್ಲಾಸ್ಪತ್ರೆಗೆ ಬರ್ತಾರೆ. ವೈದ್ಯರಿದ್ದರೆ ಮೆಡಿಸಿನ್ ಸಿಗೊಲ್ಲ. ನರ್ಸ್ಗಳಿದ್ರೆ ಡಾಕ್ಟರ್ ಇರೋಲ್ಲ. ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ಜನರು, ರೋಗಿಗಳು ಹೈರಾಣಾಗುತ್ತಿದ್ದಾರೆ. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದ್ದು, ಎಕ್ಸ್ ರೇ ಮಾಡಿಸಲು ರೋಗಿಗಳು ಪರದಾಡುತ್ತಿದ್ದಾರೆ.
ಜಿಲ್ಲಾಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ನಲ್ಲಿ ಎಕ್ಸರೇ ಮಷೀನ್ ಕೆಟ್ಟು ಹೋಗಿದ್ದು, ಬರುವಂತ ರೋಗಿಗಳು ಎಕ್ಸ್ ರೇ ಮಾಡಿಸಲು ಹಳೆಯ ಕಟ್ಟಡಕ್ಕೆ ಬರಬೇಕಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಟೋ ಚಾಲಕರು 100 ಮೀಟರ್ ಕೂಡ ಇರದ ದೂರಕ್ಕೆ ರೋಗಿಗಳನ್ನು ಹೊಸ ಬಿಲ್ಡಿಂಗ್ ನಿಂದ ಹಳೆ ಬಿಲ್ಡಿಂಗ್ ಗೆ ತಂದು ಬಿಡಲು ಆಂಬುಲೆನ್ಸ್ ನಲ್ಲಿ 500 ಹಾಗೂ ಆಟೋದಲ್ಲಿ ಇನ್ನೂರು ರೂಪಾಯಿಗಳನ್ನು ತೆಗೆದುಕೊಳ್ಳುತ್ತಿರುವುದು ಕೂಡ ಕಂಡು ಬಂದಿದೆ.
ಇನ್ನು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಮಾಹಿತಿ ಕೊಡದೆ ಅಧಿಕಾರಿಗಳು ನಿರ್ಲಕ್ಷ ತೋರಿಸುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಹೊಸ ಬಿಲ್ಡಿಂಗ್ ನಿಂದ ಹಳೆ ಬಿಲ್ಡಿಂಗ್ ಗೆ ಬರಲು ವೀಲ್ ಚೇರ್ ಕೇಳಿದ್ರು ಸಹ ಕೊಡ್ತಿಲ್ಲ ಎನ್ನಲಾಗ್ತಿದೆ. ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ವೀಲ್ ಚೇರ್ ಇಲ್ಲ ಎಂದರೆ ಹೇಗೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇನೇ ಇರಲಿ ಜಿಲ್ಲಾ ಆಸ್ಪತ್ರೆಯ ಕರ್ಮಕಾಂಡಗಳ ಬಗ್ಗೆ ನಿಮ್ಮ ಪ್ರಜಾ ಶಕ್ತಿ ಟಿವಿಯು ನಿರಂತರ ಸುದ್ದಿ ಬಿತ್ತರಿಸುತ್ತಿದೆ. ಆದರೂ ಕೂಡ ಜಿಲ್ಲಾ ಆಸ್ಪತ್ರೆಯ ಚಿತ್ರಣ ಮಾತ್ರ ಬದಲಾಗದೇ ಇರುವುದು ಬೇಸರದ ಸಂಗತಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿ ಸ್ಪಂದಿಸಬೇಕಿದೆ. ಹಾಗೇಯೇ ಎಕ್ಸ್ ರೇ ಉಪಕರಣವನ್ನು ಸರಿಪಡಿಸಬೇಕು, ಜೊತೆಯಲ್ಲಿ ಆಟೋ ಮತ್ತು ಖಾಸಗಿ ಆಂಬುಲೆನ್ಸ್ಗೆ ಕಡಿವಾಣ ಹಾಕಬೇಕಿದೆ.