ತುಮಕೂರು:
ತುಮಕೂರು ಈಗಾಗಲೇ ಸ್ಮಾರ್ಟ್ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಇಂತಹ ನಗರದಲ್ಲಿ ಸ್ಚಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ. ಜನರ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಅಧಿಕಾರಿಗಳು ವಾರ್ಡ್ಗಳಲ್ಲಿ ಜನಸ್ಪಂದನ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಿದ್ದಾರೆ. ಆದ್ರೆ ಇಂದಿಗೂ ಕೂಡ ಜನರ ಸಮಸ್ಯೆ ತಪ್ಪಿಲ್ಲ. ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಹೊಲಸು ನೀರಿನಿಂದ ತುಂಬಿರುವ ಚರಂಡಿಗಳ ದುರ್ನಾತಕ್ಕೆ ಜನರು ಹೈರಾಣಾಗುತ್ತಿದ್ದಾರೆ.
ಕಳೆದ 3 ದಿನಗಳಿಂದ ತುಮಕೂರಿನಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಮಳೆಯಿಂದಾಗಿ ಹಲವೆಡೆ ಅವಾಂತರ ಕೂಡ ಸೃಷ್ಠಿಯಾಗಿತ್ತು. ಇತ್ತ ಕೆಲವು ಏರಿಯಾಗಳಲ್ಲಿ ಚರಂಡಿ ನೀರು ಮುಂದೆ ಹೋಗದೆ ನಿಂತಲ್ಲಿಯೇ ನಿಂತಿದ್ದು, ಜನ ದುರ್ನಾತದಲ್ಲಿಯೇ ಬದುಕು ಕಳೆಯು ವಂತಾ ಗಿದೆ. ತುಮಕೂರು ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗ್ತಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದೆ. ಈ ಹೊಸಲು ನೀರಿನ ವಾಸನೆಯಿಂದಾಗಿ ಜನ ಈಚೆ ಬರಲು ಆಗದೆ ಮನೆಯಲ್ಲಿಯೂ ಇರಲು ಆಗದೆ ಪರದಾಡುತ್ತಿದ್ದಾರೆ.
ತುಮಕೂರಿನ ನಜರಾಬಾದ್ 1ನೇ ಅಡ್ಡ ರಸ್ತೆಯಲ್ಲಿ ಅಳವಡಿಸಿರೋ ಯುಜಿಡಿ ಪೈಪ್ ಗಳಿಂದ ನೀರು ರಸ್ತೆ ಮೇಲೆ ಹರಿದು ಬರ್ತಿದೆ. ಈ ಕೊಳಚೆ ನೀರಿನ ವಾಸನೆಯಿಂದ ಜನ ಹಲವು ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಎಷ್ಟೇ ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದ್ರು ಕ್ಯಾರೆ ಅನ್ನುತ್ತಿಲ್ಲವಂತೆ.
ಇನ್ನು ಕಳೆದ ನಾಲ್ಕೈದು ವರ್ಷಗಳಿಂದಲೂ ಈ ಯುಜಿಡಿ ಸಮಸ್ಯೆ ಇದ್ದು, ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದ್ರು ಅಧಿಕಾರಿಗಳು ಸ್ಪಂಧಿಸುತ್ತಿಲ್ಲವಂತೆ. ಇನ್ನು ಯುಜಿಡಿ ನೀರು ರಸ್ತೆ ಮೇಲೆ ಹರಿಯುತ್ತಿರೋದ್ರಿಂದ ಇಡೀ ಏರಿಯಾ ಗಬ್ಬೇದು ನಾರುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಯುಜಿಡಿ ಕೊಳಚೆ ನೀರು ಮನೆಯೊಳಗೆ ಹರಿದಿತ್ತು. ಆ ಸಮಯದಲ್ಲಿ ನಾವು ಮನೆಯಲ್ಲಿ ವಾಸ ಮಾಡಲು ಕಷ್ಟವಾಗ್ತಿದೆ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದರು.
ಇನ್ನು ಅಧಿಕಾರಿಗಳು ಕಂದಾಯ ಕಟ್ಟಿಸಿಕೊಳ್ಳಲು ಮಾತ್ರ ಬರ್ತಾರೆ. ನಮಗೆ ಯುಜಿಡಿ ಸಮಸ್ಯೆ ಅಂತ ಎನಾದ್ರು ಕಾಲ್ ಮಾಡಿದ್ರೆ ಮಾತ್ರ ಸ್ಪಂದಿಸಲ್ಲ. ನಗರದಲ್ಲಿ 35 ವಾರ್ಡ್ ಗಳಿವೆ ನೀವು ಕಾಲ್ ಮಾಡಿದ ತಕ್ಷಣ ಗಾಡಿ ಕಳಿಸೋಕೆ ಆಗಲ್ಲ ಅಂತ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಅಂತ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಇನ್ನಾದ್ರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ನಜರಾಬಾದ್ ನಿವಾಸಿಗಾಳಿಗೆ ಮಾರಕವಾಗಿರುವ ಯುಜಿಡಿ ಸಮಸ್ಯೆ ಯನ್ನ ಬಗೆಹರಿಸಬೇಕಿದೆ. ಇಲ್ಲವಾದಲ್ಲಿ ಇಲ್ಲಿನ ಜನರು ಡೆಂಗ್ಯೂ , ಮಲೇರಿಯದಂತಹ ಮಾರಕ ರೋಗಗಳಿಗೆ ತುತ್ತಾಗಿ ಸಾವು ನೋವು ಸಂಭವಿಸುವುದು ಗ್ಯಾರೆಂಟಿ.