CHIKKANAYAKANAHALLI : ಒಂದೇ ಸುದ್ದಿ ಬಂತು ಕರೆಂಟ್‌ | ಪ್ರಜಾಶಕ್ತಿ ಟಿವಿ ಶ್ಲಾಘಿಸಿದ ಜನ

CHIKKANAYAKANAHALLI NEWS : ಚಿಕ್ಕನಾಯಕನಹಳ್ಳಿಯಲ್ಲಿರುವ KSRTC ಬಸ್‌ ನಿಲ್ದಾಣವೂ ಕಗ್ಗತ್ತಲಲ್ಲಿ ಮುಳುಗಿತ್ತು. ಇಲ್ಲಿ ಕತ್ತಲಾದ್ರೆ ಲೈಟ್‌ಗಳು ಆನ್‌ ಆಗುತ್ತಿರಲಿಲ್ಲ. ಸಂಜೆಯಾಗುತ್ತಿದಂತೆ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರು ಪರದಾಡುತ್ತಿದ್ದರು. ಮಹಿಳೆಯರು ಜೀವಭಯದಲ್ಲಿಯೇ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದರು. ಇತ್ತ ಕೂರಲು ಖುರ್ಚಿ ಕೂಡ ಇರದೆ ಬಸ್‌ ನಿಲ್ದಾಣ ಸೊರಗುತ್ತಿದೆ ಎಂದು ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಮಾಡಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳು ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣ ವಿದ್ಯುತ್‌ ದ್ವೀಪ ಅಳವಡಿಸಿದ್ದಾರೆ.

ವರದಿ ಪ್ರಸಾರವಾದ ಕೇವಲ 48 ಗಂಟೆಗಳೊಳಗೆ ಅಧಿಕಾರಿಗಳು ಸ್ಪಂದಿಸಿದ್ರು, ದೀಪಗಳನ್ನು ದುರಸ್ತಿ ಮಾಡಿ ಬಸ್ ನಿಲ್ದಾಣವನ್ನು ಮತ್ತೆ ಬೆಳಕಿನತ್ತ ತಂದಿದ್ದಾರೆ. ಜೊತೆಗೆ, ನಿಲ್ದಾಣದ ಸುತ್ತಮುತ್ತ ಬೆಳೆದಿದ್ದ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಲಾಗಿದೆ. ಇತ್ತ ಕ್ಲೀನ್‌ ಇಲ್ಲದ ಶೌಚಾಲಯಗಳೂ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ. ಈ ಸ್ಪಂದನೆಗೆ ಖುಷಿಯಾದ ಸ್ಥಳೀಯ ನಾಗರಿಕರು ಪ್ರಜಾಶಕ್ತಿ ಟಿವಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಶಕ್ತಿ ಟಿವಿ ಬಿಗ್‌ ಇಂಪ್ಯಾಕ್ಟ್

 

Author:

...
Keerthana J

Copy Editor

prajashakthi tv

share
No Reviews