MADHUGIRI NEWS : ಗ್ರಾಮದ ಅಭಿವೃದ್ಧಿಗಾಗಿ ಸರಕಾರಗಳ ಮೇಲೆ ಬೊಟ್ಟು ಮಾಡದೆ, ಗ್ರಾಮದ ಯುವಕರೇ ಕೈಜೋಡಿಸಿದರೆ ತಾನಾಗಿಯೇ ಸ್ವಚ್ಛತೆ, ಅಭಿವೃದ್ಧಿ ಕೈಗೊಳ್ಳಬಹುದು ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ನ ನಿವೃತ್ತ ಪ್ರಾಧ್ಯಪಕ. ವಿಜ್ಞಾನಿ ಕೆ.ಪಿ ಜಗನ್ನಾಥ್ ರೆಡ್ಡಿ ಮಧುಗಿರಿಯಲ್ಲಿ ತಿಳಿಸಿದರು
ಮಧುಗಿರಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ಅಸ್ತ್ರ ರೂರಲ್ ಡೆವಲೆಪಮೆಂಟ್ ಸೂಸೈಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಗ್ರಾಮದಲ್ಲಿ ಜನಸಿದ ಸುಮಾರು ಜನರು ಬಡತನದಲ್ಲಿ ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ಈ ಮಣ್ಣಿನ ವಿಶೇಷ ಮಹತ್ವದ್ದಾಗಿದೆ. ಈ ಗ್ರಾಮದ ಅಭಿವೃದ್ಧಿಗೆ ಯುವಕರು ದಿಟ್ಟ ಹೆಜ್ಜೆ ಇಟ್ಟಿದ್ದು ಗ್ರಾಮದ ಅಭಿವೃದ್ಧಿ, ನೈರ್ಮಲ್ಯ, ಬಡ ವಿಧ್ಯಾರ್ಥಿಗಳ ಶಿಕ್ಷಣ ನೆರವು, ಡಿಜಿಟಲ್ ಗ್ರಂಥಾಲಯ, ಆರೋಗ್ಯ ತಪಾಸಣೆ ಸ್ಪರ್ದಾತ್ಮಕ ಪರೀಕ್ಷೆಗೆ ನೆರವು ಸೇರಿದಂತೆ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೂಸೈಟಿಯನ್ನು ಕಟ್ಟಲಾಗಿದೆ ಎಂದರು.
ಐ.ಡಿ ಹಳ್ಳಿ ವ್ಯಾಪ್ತಿಯಲ್ಲಿರುವ ನಾಮಧಾರಿ ಕಂಪನಿಯ 446 ಎಕರೆ ಜಾಗದಲ್ಲಿ 2 ಸಾವಿರ ಕೋಟಿ ವೆಚ್ಚದಲ್ಲಿ ಸಂಶೋಧನ ಕೇಂದ್ರ ಸ್ಥಾಪನೆ ಮಾಡಲು ಖರೀಧಿಸಿದ್ದು, 5 ವರ್ಷದಲ್ಲಿ ಮಿಸೈಲ್ ಮಾಡುವ ಪ್ರಯತ್ನ ನಡೆಯುತ್ತಿದೆ. 200 ವಿಜ್ಞಾನಿಗಳು ಕೆಲಸ ಮಾಡಲಿದ್ದಾರೆ. ದೇಶಕ್ಕಾಗಿ ಸೇವೆ ಮಾಡುವ ಉದ್ದೇಶದಿಂದ ಈ ಪ್ರಯತ್ನಗಳು ನಡೆಯುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ, ಸರಕಾರ ಶಾಲೆಗಳನ್ನು ಮುಚ್ಚದಂತೆ ಸರಕಾರಿ ಶಾಲೆಗಳ ದಾಖಲಾತಿಗೆ ಹೆಚ್ಚು ನೀಡಿ ಎಂದರು.
ಈ ಸಂದರ್ಭದಲ್ಲಿ ಫ್ರೋ ನಟರಾಜು, ಮಾಜಿ ಗ್ರಾಪಂ ಸದಸ್ಯ ಪಾತಣ್ಣ, ನಿವೃತ್ತ ಶಿಕ್ಷಕಿ ಜಯಲಕ್ಷಮಮ್ಮ, ಹಿರಿಯ ಮುಖಂಡರಾದ ಆವಲಮೂರ್ತಪ್ಪ, ವಿವೇಕನಂದಪ್ಪ ಹಾಜರಿದ್ರು.