IPL 2025 : ಫೈನಲ್ ಗೆ ಸಜ್ಜಾದ ಆರ್‌ಸಿಬಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ..!

ಬೆಂಗಳೂರು : IPL 2025 ಟೂರ್ನಿಯ ಫೈನಲ್ ಪಂದ್ಯಕ್ಕೆ ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರಾಜ್ಯದ ಎಲ್ಲೆಡೆ ರಾಜಕೀಯದಿಂದ ಹಿಡಿದು ಕಲಾ ಕ್ಷೇತ್ರದ ಅನೇಕ ಗಣ್ಯರು ಆರ್‌ಸಿಬಿಗೆ ಪ್ರೋತ್ಸಾಹದ ಶುಭ ಸಂದೇಶಗಳು ಹರಿದು ಬರುತ್ತಿವೆ.

ಆರ್‌ಸಿಬಿ ಫೈನಲ್ ಪಂದ್ಯವನ್ನು ಎದುರು ನೋಡುತ್ತಿದ್ದ ಅಭಿಮಾನಿಗಳ ಜೊತೆಗೂಡಿ ಗಣ್ಯರೂ ಕೂಡ ತಮ್ಮ ಪ್ರೀತಿಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, “ಐಪಿಎಲ್ ಫೈನಲ್ ಗೆ ತಲುಪಿರುವ RCB ತಂಡದ ಮೇಲೆ ಅಪಾರ ಬೆಂಬಲವಿದೆ. ಅಭಿಮಾನಿಗಳು ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ತಂಡಕ್ಕೆ ಸಿಗಲಿ ಎಂದು ಹಾರೈಸುತ್ತೇನೆ,” ಎಂದರು.

ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ನಮ್ಮ ಕನ್ನಡದ ತಂಡ ಈ ಬಾರಿ ಕಪ್ ಗೆಲ್ಲುತ್ತೆ. ಈ ಸಲ್ ಕಪ್ ನಮ್ದೆ ಎಂದು ಜೋಶ್‌ನಿಂದ ಹೇಳಿಕೊಂಡಿದ್ದಾರೆ. ಕ್ರೀಡೆಗೆ ಒಲವು ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಕ್ರಿಕೆಟ್‌ನ ದೊಡ್ಡ ಅಭಿಮಾನಿ. ಈ ಬಾರಿ ಆರ್‌ಸಿಬಿ ಆಟಗಾರರಿಗೆ ದೇವರು ಶಕ್ತಿ ನೀಡಲಿ. ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದೇನೆ. ಕಪ್ ನಮ್ಮದೇ ಆಗಲಿ ಎಂದರು.

ವಿಪಕ್ಷ ನಾಯಕ ಆರ್. ಅಶೋಕ್, “RCB ಹಲವಾರು ವರ್ಷಗಳ ನಂತರ ಫೈನಲ್‌ ತಲುಪಿದೆ. ಈ ಬಾರಿ ಗೆಲುವು ಅವಶ್ಯಕ. ಎಲ್ಲ ಕನ್ನಡಿಗರೂ ಆ ನಿರೀಕ್ಷೆಯಲ್ಲಿದ್ದಾರೆ. ತಂಡಕ್ಕೆ ಶುಭವಾಗಲಿ,” ಎಂದು ಹಾರೈಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ “ನಮ್ಮ ತಂಡಕ್ಕೆ ಈ ಸಲ ಯಶಸ್ಸು ಖಚಿತ. ಆರ್‌ಸಿಬಿಗೆ ಬೃಹತ್ ಶುಭ ಹಾರೈಸಿದ್ದು, ನಮ್ಮ ತಂಡಕ್ಕೆ ಈ ಸಲ ಯಶಸ್ಸು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಸಂಗೀತ ನಿರ್ದೇಶಕ ಹಂಸಲೇಖ ಈ ಸಲ RCB ತಪ್ಪು ಮಾಡೋದಿಲ್ಲ. ಕಪ್ ನಮ್ದೇ ಆಗತ್ತೆ. ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.

ಒಟ್ಟಿನಲ್ಲಿ ಫೈನಲ್‌ ಪಂದ್ಯಕ್ಕೆ ಸಜ್ಜಾಗಿರುವ ಆರ್‌ ಸಿಬಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದ್ದು, ನಾಳಿನ ಹೈವೋಲ್ಟೇಜ್‌ ಪಂದ್ಯಕ್ಕಾಗಿ ಆರ್‌ ಸಿಬಿ ಫ್ಯಾನ್ಸ್‌ ಕುತೂಹಲದಿಂದ ಕಾಯ್ತಾ ಇದಾರೆ.

Author:

...
Sushmitha N

Copy Editor

prajashakthi tv

share
No Reviews