BANAGALORE : IPL 2025ರ FINAL ಪಂದ್ಯದಲ್ಲಿ ಜಯಭೇರಿ ಹೊಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇಂದು ವಿಜಯೋತ್ಸವದ ನಡೂರಲ್ಲಿ ಬೆಂಗಳೂರಿಗೆ ಆಗಮಿಸಿದೆ. ವಿಶೇಷ ವಿಮಾನದ ಮೂಲಕ HAL ವಿಮಾನ ನಿಲ್ದಾಣಕ್ಕೆ ಬಂದಿಳಿದ RCB ತಂಡದ ಆಟಗಾರರಿಗೆ, ರಾಜ್ಯ ಸರ್ಕಾರದಿಂದ ಭರ್ಜರಿ ಸ್ವಾಗತ ಲಭಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ [D.K SHIVAKUMAR] ಸ್ವತಃ ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ಆಟಗಾರರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ VIRAT KHOLI ಗೆ ಕರ್ನಾಟಕದ ಧ್ವಜವನ್ನೇ ನೀಡಿ, ಸ್ಮರಣೀಯವಾಗಿ ಅಭಿನಂದಿಸಿದರು. ಈ ತಂಡದ ಜೊತೆ ಜೊತೆಯಾಗಿ ಮಾಜಿ RCB ಆಟಗಾರರಾದ CHRIS GALYE ಮತ್ತು AB DE VELLIERS ಕೂಡ ಬೆಂಗಳೂರು ನಗರಕ್ಕೆ ಬಂದಿಳಿದಿದ್ದಾರೆ.
HAL ನಿಂದ RCB ಆಟಗಾರರು ತಾಜ್ ವೆಸ್ಟ್ಎಂಡ್ ಹೋಟೆಲಿಗೆ ತೆರಳಿದ್ದು, ಅಲ್ಲಿಗೆ ವಿರಾಮ ಪಡೆಯಲಿದ್ದಾರೆ. ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ, IPL TROPHY ಯನ್ನು ಆಪಚಾರಿಕವಾಗಿ ಸಲ್ಲಿಸಲಿದ್ದಾರೆ. ಇನ್ನು ಮುಖ್ಯಮಂತ್ರಿ ಭೇಟಿಯ ನಂತರ, ಸಂಜೆ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಭವ್ಯ PARADE ನಡೆಯಲಿದೆ. ಬೆಂಗಳೂರು ನಗರದ ರಸ್ತೆಗಳು RCB ಯ ವಿಜಯೋತ್ಸವದ ಉತ್ಸವಕ್ಕೆ ಸಜ್ಜಾಗಿವೆ.
ಸಂಜೆ 6 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಮಾರಂಭ ನಡೆಯಲಿದ್ದು, ಸಾವಿರಾರು ಆರ್ಸಿಬಿ ಅಭಿಮಾನಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಬರೋಬ್ಬರಿ 17 ವರ್ಷಗಳ ನಿರೀಕ್ಷೆಯ ನಂತರ, ಈ ಬಾರಿಗೆ ಆರ್ಸಿಬಿ ಅವರ ಐಪಿಎಲ್ ಟ್ರೋಫಿಯನ್ನು ಗೆದ್ದಿರುವುದು ಅಭಿಮಾನಿಗಳಿಗೆ ಹರ್ಷೋಲ್ಲಾಸ ತಂದಿದೆ. ಬೆಂಗಳೂರಿನ ಹೃದಯಭಾಗದಲ್ಲೇ ನಡೆಯುತ್ತಿರುವ ಈ ಉತ್ಸವ, ನಾಡಿನ ಕ್ರಿಕೆಟ್ ಪ್ರೇಮಿಗಳಿಗೆ ನಿಜವಾದ ಹಬ್ಬವಾಗಿದೆ.