CRICKET : ನೆನ್ನೆ ನಡೆದ ಈ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್, ಪಂಜಾಬ್ ಕಿಂಗ್ಸ್ ಅನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಪಂಜಾಬ್ ತಂಡದ ಆರಂಭವೇ ಅಷ್ಟೊಂದು ನಿರಾಶಾದಾಯಕವಾಗಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ತಂಡ 14.1 ಓವರ್ಗಳಲ್ಲಿ ಕೇವಲ 101 ರನ್ಗಳಿಗೆ ಆಲೌಟ್ ಆಯಿತು. ಆರ್ಸಿಬಿ ಬೌಲಿಂಗ್ ಮಂತ್ರ ದಾಳಿ ನಡೆಸಿದಂತಿತ್ತು. ವೇಗ ಮತ್ತು ಸ್ಪಿನ್ನಿನ ಸಮರ್ಪಕ ಮಿಶ್ರಣದಿಂದ ಪಂಜಾಬ್ ಕಿಂಗ್ಸ್ ಗೆ ಆಟವೇ ಆಡುವಂತಾಗಲಿಲ್ಲ. ಆರಂಭಿಕ ವಿಕೆಟ್ಗಳ ನಷ್ಟದಿಂದ ಹಿಡಿದು ಮಧ್ಯದ ಓವರ್ಗಳಲ್ಲಿ ಆಗಾಗ್ಗೆ ಉರುಳಿದ ವಿಕೆಟ್ಗಳು, ತಂಡವನ್ನು ತತ್ತರಿಸಿದವು. ಪಂಜಾಬ್ ಕಿಂಗ್ಸ್ನ ಯಾವುದೇ ಪ್ರಮುಖ ಆಟಗಾರರು ತಾವು ನಿರೀಕ್ಷಿಸಿದ್ದ ರೀತಿಯಲ್ಲಿ ಪ್ರದರ್ಶನ ನೀಡಲಾಗಿಲ್ಲ.
ಆರ್ಸಿಬಿ ತಂಡದ ನಾಯಕತ್ವ, ಪ್ರಸ್ತುತ ಸ್ಫೂರ್ತಿದಾಯಕವಾಗಿದೆ. ಟಾರ್ಗೆಟ್ ಕೇವಲ 102 ರನ್. ಓಪನರ್ ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 27 ಎಸೆತಗಳಲ್ಲಿ 56 ರನ್ ಬಾರಿಸಿದರು. ಆರು ಬೌಂಡರಿ ಮತ್ತು ಮೂರು ಸಿಕ್ಸರ್ಗಳೊಂದಿಗೆ ಅವರು ತಂಡಕ್ಕೆ ಬೆಸ್ಟ್ ಪಾಸಿಬಲ್ ಸ್ಟಾರ್ಟ್ ನೀಡಿದರು. ವಿರಾಟ್ ಕೊಹ್ಲಿ 12 ರನ್, ಮಯಂಕ್ ಅಗರ್ವಾಲ್ 19 ರನ್, ಮತ್ತು ಪಾಟಿದಾರ್ 15 ರನ್ಗಳೊಂದಿಗೆ ಆರ್ಸಿಬಿ 10 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಗುರಿಯನ್ನು ತಲುಪಿತು. ಆರ್ಸಿಬಿ 60 ಎಸೆತಗಳನ್ನು ಉಳಿಸಿಕೊಂಡು ಗೆದ್ದಿದ್ದು, ಇದು ಐಪಿಎಲ್ ಪ್ಲೇಆಫ್ ಅಥವಾ ನಾಕೌಟ್ ಹಂತಗಳಲ್ಲಿ ದಾಖಲಾಗಿರುವ ಅತಿದೊಡ್ಡ ಜಯದ ಅಂತರವಾಗಿದೆ. ಈ ಮೂಲಕ ಆರ್ಸಿಬಿ ಯು 2024ರ ಫೈನಲ್ನಲ್ಲಿ ಕೆಕೆಆರ್ ನೀಡಿದ್ದ 57 ಎಸೆತಗಳ ಹಿಂದಿನ ದಾಖಲೆಯನ್ನು ಮುರಿಯಿತು.
ಈ ಜಯದೊಂದಿಗೆ ಆರ್ಸಿಬಿ ತನ್ನ ಐಪಿಎಲ್ ಇತಿಹಾಸದ ನಾಲ್ಕನೇ ಫೈನಲ್ ಪ್ರವೇಶ ಮಾಡಿದೆ – 2009, 2011, 2016ರ ನಂತರ ಇದು ನಾಲ್ಕನೇ ಪ್ರಯತ್ನ. ಈ ಬಾರಿ ಚಾಂಪಿಯನ್ ಆಗುವ ಭರವಸೆಯೊಂದಿಗೆ ಅಭಿಮಾನಿಗಳು ಹುಮ್ಮಸ್ಸಿನಿಂದ ಕಾದು ನೋಡುತ್ತಿದ್ದಾರೆ.
ಇನ್ನು ಆರ್ಸಿಬಿಯ ಈ ಸಾಧನೆಗೆ ಮಾಜಿ ಉದ್ಯಮಿ ಮತ್ತು ಆರ್ಸಿಬಿಯ ಮೊದಲ ಸಹ ಸ್ಥಾಪಕ ವಿಜಯ್ ಮಲ್ಯ ಟ್ವಿಟ್ಟರ್ (X) ನಲ್ಲಿ ಸಂತಸ ವ್ಯಕ್ತಪಡಿಸಿದ್ದು, "ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ. ಧೈರ್ಯದಿಂದ ಆಡಿರಿ, ಕಪ್ ಗೆಲ್ಲಿರಿ!" ಎಂದು ಶುಭ ಹಾರೈಸಿದ್ದಾರೆ.