CRICKET : ಕಾಲ್ತುಳಿತ ಪ್ರಕರಣದ ಬಗ್ಗೆ ರಾಹುಲ್‌ ದ್ರಾವಿಡ್‌ ಪ್ರತಿಕ್ರಿಯೆ

CRICKET NEWS : ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಸಾವಿಗೀಡಾಗಿದ್ದರು ಹಾಗೂ 47 ಮಂದಿ ಗಾಯಕ್ಕೆ ತುತ್ತಾಗಿದ್ದರು. ಜೂನ್ 4 ರಂದು ಈ ದುರ್ಘಟನೆ ನಡೆದಿತ್ತು. ಇದೀಗ ಒಂದು ವಾರದ ಬಳಿಕ ಭಾರತೀಯ ಕ್ರಿಕೆಟ್ ದಿಗ್ಗಜ ಹಾಗೂ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಪ್ರತಿಕ್ರಿಯಿಸಿದ್ದಾರೆ.

ಆರ್ಸಿಬಿಯ 18 ವರ್ಷಗಳ ಕನಸು ನನಸಾದರೂ ಈ ದುರ್ಘಟನೆಯು ತಂಡದ ಹಾಗೂ ಅಭಿಮಾನಿಗಳ ಸಂಭ್ರಮವನ್ನು ಅಂತ್ಯಗೊಳಿಸಿತು. ಎನ್ಡಿ ಟಿವಿ ಜತೆ ಮಾತನಾಡಿದ ರಾಹುಲ್ ದ್ರಾವಿಡ್, "ಹೌದು, ತುಂಬಾ ಬೇಸರವಾಯಿತು. ನಿಸ್ಸಂಶಯವಾಗಿ ತುಂಬಾ ನೋವಾಯಿತು. ನನ್ನ ಭಾವನೆಗಳು ಯಾವಾಗಲೂ ಜನರ ಜೊತೆ ಇರುತ್ತದೆ," ಎಂದು ಹೇಳಿದ್ದಾರೆ. "ಬೆಂಗಳೂರು ನಿಜವಾಗಿಯೂ ಕ್ರೀಡಾ ಉತ್ಸಾಹಿಗಳ ನಗರವಾಗಿದೆ. ನಾನು ಕೂಡ ಇಲ್ಲಿಂದ ಬಂದವನು. ಇಲ್ಲಿನ ಜನರು ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ಕ್ರೀಡೆಯನ್ನು ಇಷ್ಟಪಡುತ್ತಾರೆ. ಈ ನಗರದಲ್ಲಿ ಎಲ್ಲಾ ಕ್ರೀಡೆಗಳನ್ನು ಜನರು ಇಷ್ಟಪಡುತ್ತಾರೆ ಹಾಗೂ ಫುಟ್ಬಾಲ್ ಇರಲಿ ಅಥವಾ ಕಬಡ್ಡಿ ಇರಲಿ ಎಲಾ ಕ್ರೀಡಾ ತಂಡಗಳನ್ನು ಅವರು ಹಿಂಬಾಲಿ ಸುತ್ತಾರೆ," ಎಂದು ರಾಜಸ್ಥಾನ್ ರಾಯಲ್ಸ್ ಹೆಡ್ ಕೋಚ್ ತಿಳಿಸಿದ್ದಾರೆ.

Author:

...
Keerthana J

Copy Editor

prajashakthi tv

share
No Reviews