ಕೊರಟಗೆರೆ : ಕಿಡಿಗೇಡಿಗಳ ಕೃತ್ಯಕ್ಕೆ ಬಡವನ ಪೆಟ್ಟಿ ಅಂಗಡಿ ಸುಟ್ಟು ಭಸ್ಮ

ಅಂಗಡಿ ಸುಟ್ಟು ಭಸ್ಮವಾಗಿರುವುದು.
ಅಂಗಡಿ ಸುಟ್ಟು ಭಸ್ಮವಾಗಿರುವುದು.
ತುಮಕೂರು

ಕೊರಟಗೆರೆ:

ಕಿಡಿಗೇಡಿಗಳ ಕೃತ್ಯಕ್ಕೆ ಬಡವನ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ ಕೊರಟಗೆರೆ ತಾಲೂಕಿನ ಗೌರಗನಹಳ್ಳಿ ಕ್ರಾಸ್‌ ಬಳಿ ನಡೆದಿದ್ದು, ಬೆಂಕಿಯ ಕೆನ್ನಾಲಗೆಗೆ ಅಂಗಡಿಯಲ್ಲಿದ್ದ ದಿನಸಿ ಪದಾರ್ಥಗಳು ಸುಟ್ಟು ಭಸ್ಮವಾಗಿದೆ. ಗೌರಗನಹಳ್ಳಿ ಗ್ರಾಮದ ನಿವಾಸಿ ರಂಗಪ್ಪ ಎಂಬುವವರಿಗೆ ಸೇರಿದ ಪೆಟ್ಟಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಿಟ್ಟಿದ್ದು, ಅಂಗಡಿಯಲ್ಲಿದ್ದ ವಸ್ತುಗಳು ಸೇರಿ ಅಂಗಡಿಯೇ ಸಂಪೂರ್ಣ ಭಸ್ಮವಾಗಿದೆ.

ರಂಗಪ್ಪ ಜೀವನೋಪಾಯಕ್ಕೆಂದು ಎರಡು ವರ್ಷಗಳಿಂದ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದ. ಯುಗಾದಿ ಹಬ್ಬಕ್ಕೆಂದು ಕೆಲವರ ಹತ್ತಿರ ಸಾಲ ಮಾಡಿ ಅಂಗಡಿಗೆ ಬಂಡವಾಳ ಹಾಕಿದ್ರು, ಆದ್ರೆ ಯಾರೋ ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಇಟ್ಟಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ರು. ಆದ್ರೆ ಬೆಂಕಿ ನಂದಿಸುವಷ್ಟರಲ್ಲಿ ಅಂಗಡಿಯಲ್ಲಿದ್ದ ಸುಮಾರು 60 ಸಾವಿರ ಮೌಲ್ಯದ ದಿನಸಿ ಪದಾರ್ಥಗಳು ಬೆಂಕಿಗಾಹುತಿಯಾಗಿವೆ. ಪೆಟ್ಟಿ ಅಂಗಡಿ ಮಾಲೀಕ ರಂಗಪ್ಪ ಕಣ್ಣೀರಾಕುತ್ತಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

Author:

...
Editor

ManyaSoft Admin

share
No Reviews